Publish Date: Fri, 27 Dec 2019 (06:21 IST)
Updated Date: Fri, 27 Dec 2019 (06:23 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು.
ಮೀನರಾಶಿಯಲ್ಲಿ ಹುಟ್ಟಿದವರು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಹಾಗೇ ಇವರು ಜಾಜಿ, ಮಲ್ಲಿಗೆ , ನಂದಿಬಟ್ಟಲು ಗಿಡಗಳನ್ನು ಬೆಳಸಿ ಪ್ರತಿದಿನ ನೀರು ಹಾಕಬೇಕು. ಹೀಗೆ ಮಾಡಿದರೆ ಲಕ್ಷ್ಮೀದೇವಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ವಾಸಿಸುತ್ತಾಳೆ.
ಹಾಗೇ ಇವರು ಅವಮಾಸ್ಯೆ ದಿನದಂದು ಪಿತೃದೇವರು( ತಾತ, ಮುತ್ತಾತ) ಪೋಟೋವನ್ನು ದಕ್ಷಿಣ ದಿಕ್ಕಿನಲ್ಲಿಟ್ಟು ಅಗರ್ ಬತ್ತಿ ಹಚ್ಚಬೇಕು. ಯಾವುದಾದರೂ ನೈವೇದ್ಯವನ್ನು ಸಮರ್ಪನೆ ಮಾಡಿ ಬಳಿಕ ಕುಟುಂಬಸ್ಥರು ಸೇವಿಸಬೇಕು. ಇದನ್ನು ಮಾಡುವುದರಿಂದ ಪಿತೃ ದೇವರ ಅನುಗ್ರಹದಿಂದ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.