Webdunia - Bharat's app for daily news and videos

Install App

ಶಮಿ ಪತ್ರೆಯಿಂದ ಯಾವ ದೇವರಿಗೆ ಪೂಜೆ ಮಾಡಿದರೆ ಏನು ಫಲ ದೊರೆಯುತ್ತದೆ ಎಂಬುದು ತಿಳಿಬೇಕಾ

Webdunia
ಬುಧವಾರ, 31 ಅಕ್ಟೋಬರ್ 2018 (14:58 IST)
ಬೆಂಗಳೂರು : ದೇವರಿಗೆ ಹೆಚ್ಚಾಗಿ ಹೂವಿನಿಂದ ಪೂಜೆ ಮಾಡುತ್ತಾರೆ ಆದರೆ ಕೆಲವೊಂದು ದೇವರಿಗೆ ಪತ್ರೆಗಳಿಂದ ಪೂಜೆಮಾಡುತ್ತಾರೆ. ಈ ಪತ್ರೆಗಳಲ್ಲಿ ಶಮಿ ಪತ್ರೆಯು ಒಂದು. ಈ ಪತ್ರೆಯಿಂದ ಯಾವ ದೇವರಿಗೆ ಪೂಜೆ ಮಾಡಿದರೆ ಏನು ಫಲ ದೊರೆಯುತ್ತದೆ ಎಂಬುದನ್ನು ತಿಳಿಯೋಣ.


ಶಮಿ ಪತ್ರೆ ಎಂದರೆ ಬನ್ನಿ ಮರದ ಪತ್ರೆ. ಸಾಮಾನ್ಯವಾಗಿ ಶಮಿ ಪತ್ರೆ ಶನೇಶ್ವರನಿಗೆ ಪ್ರಿಯವಾದದ್ದು, ಪಂಚಮ ಶನಿಕಾಟ, ಅಷ್ಟಮ ಶನಿಕಾಟ ಹಾಗೂ ಏಳೂವರೆ ವರ್ಷ ಶನಿ ಕಾಟ ಇರುವವರು ಶನೇಶ್ವರನಿಗೆ ಶನಿವಾರದಂದು ಪೂಜೆ ಮಾಡಿದರೆ ತೊಂದರೆ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಇತರ ಗ್ರಹಗಳಿಗೆ ಪೂಜೆ ಮಾಡಿದರೆ ಶುಭಫಲ ದೊರಕುತ್ತದೆ. ಕೆಲವರಿಗೆ ಬಹಳ ಕಾಲದಿಂದ ಆರೋಗ್ಯದಲ್ಲಿ ತೊಂದರೆ ಇದ್ದು ನರಳಾಟ, ನೋವು ಸಂಕಟವಿದ್ದಾಗ ಈಶ್ವರನಿಗೆ ಪ್ರತಿ ಸೋಮವಾರ ಈ ಪತ್ರೆಯಿಂದ ಪೂಜೆ ಮಾಡಿದರೆ ಆರೋಗ್ಯ ಲಭಿಸುತ್ತದೆ.


ಮನೆಯಲ್ಲಿ ಅಶಾಂತಿ,  ಕುಟುಂಬದಲ್ಲಿ ಕಲಹದಂತಹ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಶಮೀಪತ್ರೆಯಿಂದ ಪೂಜೆ ಮಾಡಿದರೆ ಶುಭ, ನೆಮ್ಮದಿ, ಶಾಂತಿ ದೊರಕುತ್ತದೆ. ಜನ್ಮಾಂತರದ ಪಾಪ ಕರ್ಮಗಳು, ಮನೆಯಲ್ಲಿ ಶುಭಕಾರ್ಯಗಳಿಗೆ ತೊಂದರೆ, ಮಕ್ಕಳ ಆರೋಗ್ಯ  ವಿದ್ಯಾಭ್ಯಾಸ ವಿವಾಹ ಮುಂತಾದವುಗಳಲ್ಲಿ ತೊಂದರೆ ಇದ್ದಾಗ ಶ್ರೀಚಕ್ರ ಸಮೇತ ಯಾವುದೇ ದೇವಿ ದೇವಸ್ಥಾನಕ್ಕೆ ಹೋಗಿ ಶಮೀಪತ್ರೆಯಿಂದ ಪೂಜೆ ಮಾಡಿದರೆ ಒಳ್ಳೇದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments