Webdunia - Bharat's app for daily news and videos

Install App

ಶನಿ ದೆಸೆಯ ಕೊನೆಯ ಹಂತದಲ್ಲಿ ಏನೆಲ್ಲಾ ಸಮಸ್ಯೆಗಳಾಗುತ್ತವೆ

Krishnaveni K
ಶನಿವಾರ, 31 ಆಗಸ್ಟ್ 2024 (08:47 IST)
ಬೆಂಗಳೂರು: ಶನಿ ದೆಸೆಯಲ್ಲಿ ಮೂರು ಹಂತಗಳಿದ್ದು, ಕೊನೆಯ ಹಂತದಲ್ಲಿ ವ್ಯಕ್ತಿಯು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಾನೆ. ಅವುಗಳು ಏನೆಲ್ಲಾ ಎಂದು ಇಲ್ಲಿ ನೋಡೋಣ.

ಜ್ಯೋತಿಷ್ಯದ ಪ್ರಕಾರ ಶನಿ ಕರ್ಮಕಾರಕನಾಗಿದ್ದು, ನಮ್ಮ ಕರ್ಮಫಲಗಳಿಗೆ ಅನುಗುಣವಾಗಿ ಆತ ತೀಕ್ಷ್ಣವಾದ ಶಿಕ್ಷೆ ನೀಡುತ್ತಾನೆ. ಶನಿ ದೇವನ ವಕ್ರ ದೃಷ್ಟಿ ಬಿದ್ದರೆ ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಶನಿವಾರಗಳಂದು ಶನಿ ದೇವ ಅಥವಾ ಆಂಜನೇಯ ಸ್ವಾಮಿಯ ಸೇವೆ ಮಾಡುತ್ತಿದ್ದರೆ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

ಅದರಲ್ಲೂ ಸಾಡೇ ಸಾತಿ ಶನಿ ಎಂದರೆ ಅತ್ಯಂತ ಪ್ರಬಲವಾಗಿರುವುದಾಗಿದೆ. ಸಾಡೇ ಸಾತಿ ಶನಿ ಅತ್ಯಂತ ತೀಕ್ಷ್ಣ ಪರಿಣಾಮವುಂಟು ಮಾಡುತ್ತದೆ. ಇದು ಮೂರು ಹಂತಗಳಲ್ಲಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಕೊನೆಯ ಹಂತದಲ್ಲಿ ನಾವು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಸಾಡೇ ಸಾತಿ ಶನಿಯಲ್ಲಿ ಮೊದಲ ಹಂತದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತೀರಿ. ಎರಡನೆಯ ಹಂತದಲ್ಲಿ ಕುಟುಂಬ, ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಮೂರನೇ ಹಂತದಲ್ಲಿ ಭೌತಿಕ ಸಂತೋಷಗಳನ್ನು ಕಳೆದುಕೊಳ್ಳುತ್ತೀರಿ. ಮಕ್ಕಳು, ಮನೆಯವರೊಂದಿಗೆ ಕಲಹ, ಭಿನ್ನಾಭಿಪ್ರಾಯಗಳಾಗುತ್ತವೆ. ದೈಹಿಕವಾಗಿ ನೋವು ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಶನಿ ದೇವನ ಆರಾಧನೆ ಮಾಡುತ್ತಿದ್ದರೆ ತಕ್ಕ ಮಟ್ಟಿಗೆ ಪರಿಣಾಮದ ಪ್ರಭಾವ ತಗ್ಗಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments