Select Your Language

Notifications

webdunia
webdunia
webdunia
webdunia

ಬುಧವಾರ ಕೆಲಸದಲ್ಲಿ ಯಶಸ್ಸು ಸಿಗಲು ಈ ಮಂತ್ರ ಪಠಿಸಿ

Lord Ganesha

Krishnaveni K

ಬೆಂಗಳೂರು , ಬುಧವಾರ, 28 ಆಗಸ್ಟ್ 2024 (08:43 IST)
ಬೆಂಗಳೂರು: ಬುಧವಾರ ಇಂದು ವಿದ್ಯಾಧಿಪತಿ ಗಣೇಶನಿಗೆ ಮೀಸಲಾದ ದಿನವಾಗಿದೆ. ಇಂದು ಈ ಒಂದು ಮಂತ್ರವನ್ನು ಹೇಳಿ ದಿನದಾರಂಭ ಮಾಡಿದರೆ ಎಲ್ಲಾ ಕೆಲಸಗಳೂ ಯಶಸ್ವಿಯಾಗುತ್ತವೆ. ಅದು ಯಾವ ಮಂತ್ರ ನೋಡಿ.

ಬುಧವಾರ ಗಣಪತಿಯನ್ನು ಪೂಜೆ ಮಾಡುವುದರಿಂದ ನಮ್ಮ  ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನೂ ಪರಿಹರಿಸಿಕೊಡುತ್ತಾನೆ. ವಿಘ್ನಗಳು ನಿವಾರಣೆಯಾಗುತ್ತವೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಯಶಸ್ಸು ತಂದುಕೊಡುತ್ತಾನೆ. ಇನ್ನು, ಉದ್ಯೋಗಿಗಳಿಗೆ ಉನ್ನತ ಸ್ಥಾನಕ್ಕೇರಲು ಸಹಾಯವಾಗುತ್ತದೆ ಎಂಬ ನಂಬಿಕೆಯಿದೆ.

ಹೀಗಾಗಿ ನಾವು ಓದುವ ಅಥವಾ ಕೆಲಸ ಮಾಡುವ ಟೇಬಲ್ ಮೇಲೆ ಗಣೇಶನ ಪುಟಾಣಿ ವಿಗ್ರಹವೊಂದನ್ನು ಇಟ್ಟುಕೊಂಡು ಪ್ರಾರ್ಥನೆ ಮಾಡಿ ಕೆಲಸ ಶುರು ಮಾಡುವುದು ಉತ್ತಮ. ಇಂದು ಗಣೇಶನ ಆಶೀರ್ವಾದ ಪಡೆಯುವುದರಿಂದ ವಿದ್ಯಾರ್ಥಿಗಳೂ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಾರೆ.

ಅದಕ್ಕಾಗಿ ಇರುವ ಸರಳ ಮಾರ್ಗವೆಂದರೆ ಈ ದಿನ ‘ಓಂ ಗಣಪತಯೇ ನಮಃ’ ಅಥವಾ ‘ಶ್ರೀ ಗಣಪತಯೇ ನಮಃ’ ಎನ್ನುವ ಮಂತ್ರವನ್ನು 108 ಬಾರಿ ಜಪಿಸಿ ಇಂದಿನ ದಿನ ಶುರು ಮಾಡಿ. ಇದರಿಂದ ನಿಮ್ಮ ಜೀವನದ ಎಲ್ಲಾ ವಿಘ್ನಗಳು ನಿವಾರಣೆಯಾಗಿ ಯಶಸ್ಸು ಕಂಡುಕೊಳ್ಳುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?