Select Your Language

Notifications

webdunia
webdunia
webdunia
webdunia

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಬೆಂಗಳೂರು , ಶುಕ್ರವಾರ, 20 ಜುಲೈ 2018 (12:32 IST)
ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ಸಂವತ್ಸರ ದಕ್ಷಿಣಾಯನ ಆಶಾಡ ಮಾಸ ಶುಕ್ಲಪಕ್ಷ ಗ್ರೀಷ್ಮ ಋತು ದಿನಾಂಕ ೨೦/೭/೧೮ ಶುಕ್ರವಾರ ಅಷ್ಟಮಿ ತಿಥಿ ಮದ್ಯಾಹ್ನ ೧/೨೦ ರ ವರೆಗೆ ಮಳೆ ನಕ್ಷತ್ರ ಪುನರ್ವಸು ನಿತ್ಯ ನಕ್ಷತ್ರ ಚಿತ್ತ ಬೆಳಗ್ಗೆ ೮/೯ ರ ವರೆಗೆ ಸೂರ್ಯೋದಯ ೬/೧೬ ಸೂರ್ಯಾಸ್ತ ೭/೧ ರಾಹುಕಾಲ ಬೆಳಗ್ಗೆ ೧೦/೩೦ ರಿಂದ೧೨. ನವಮಿ ಶ್ರಾದ್ದಾದಿಗಳನ್ನ ಇವತ್ತೆ ಮಾಡತಕ್ಕದ್ದು. ದಿನ ವಿಶೇಷ ತುಲಾರಾಶಿಯಲ್ಲಿ ಗಜಕೇಸರಿ ಯೊಗ ಇದೆ  ಭಾರತದಿಂದ ಮಹತ್ವದ ಪ್ರಕಟಣೆ ಸಾದ್ಯತೆ. ಆರ್ಥಿಕ ಏರಿಕೆ. 
ರಾಶಿ ಫಲ.
 ಮೇಷ. ಉತ್ತಮ ದಿನ, ಯಾವುದೇ ಅಡೆತಡೆಯಿಲ್ಲದೇ ಸುಗಮವಾಗಿ ಸಾಗುವ ಉತ್ತಮ ದಿನ, ಸಕಲ ಕಾರ್ಯಕ್ಕೆ ಶುಭ
 
ವೃಷಭ. ಅನಾರೋಗ್ಯ, ಕಿರಿಕಿರಿ, ದೇಹದಲ್ಲಿನ ಅಸೌಖ್ಯದಿಂದ ಮಾನಸಿಕವಾಗಿ ನೆಮ್ಮದಿ ಹಾಳಾಗಲಿದ್ದು, ಮಹತ್ವದ ಕಾರ್ಯ ಮಾಡುವುದು ಸೂಕ್ತವಲ್ಲ.
 
ಮಿಥುನ; ಮಕ್ಕಳಿಂದ ಶುಭವಾರ್ತೆ, ಸಂತಸ; ಮಕ್ಕಳು ತರುವ ಶುಭ ವಾರ್ತೆಯಿಂದ ಮನೆಯಲ್ಲಿ ಸಂತಸ ನೆಲೆಸಲಿದೆ.
 
ಕರ್ಕ; ವಾಹನ ಖರಿದಿ.ಸಂತಸ; ವಾಹನ ಖರೀದಿಯ ಯೋಗವಿದ್ದು, ಸಂತಸದ ದಿನವಾಗಲಿದೆ.
 
ಸಿಂಹ; ಸಣ್ಣ ಪ್ರವಾಸ,ಕಿರು ಮನರಂಜನೆ, ಸಣ್ಣಪುಟ್ಟ್ ಕಿರಿಕಿರಿಯಿಂದ ಬೇಸತ್ತ ಮನಸ್ಸಿಗೆ ಕೊಂಚ ಉಲ್ಲಾಸ ಲಭಿಸಲಿದೆ.
 
ಕನ್ಯಾ; ಮೃಷ್ಟಾನ್ನ ಬೊಜನ, ಇಚ್ಚೆಯಂತೆಯೇ ಸುಖ ಭೋಜನದಿಂದ ನೆಮ್ಮದಿ, ಸುಗಮವಾಗಿ ಸಾಗುವ ದಿನ
 
ತುಲಾ; ಮಹತ್ವದ ಸಬೆ, ನಿರೀಕ್ಷಿಸದೇ ಇರುವ ಮಹತ್ವದ ಸಭೆ ನಡೆಯಲಿದ್ದು ಪೂರ್ವ ತಯಾರಿ ಅಗತ್ಯ.ಧೈರ್ಯದಿಂದ ಮುನ್ನಡೆಯಿರಿ
 
ವೃಶ್ಚಿಕ; ಶುಭಕಾರ್ಯ, ಗಡಿಬಿಡಿಯ ದಿನ, ಮುಗಿಸಲಾಗದಷ್ಟು ಕೆಲಸ, ಹಾಸಿಗೆಯಷ್ಟೇ ಕಾಲು ಚಾಚು ಎಂಬುದನ್ನು ಮರೆಯದಿರಿ.
 
ಧನು ;ತಡೆ ಹಿಡಿದ ಧನಾಗಮನ, ಹಲವು ದಿನಗಳಿಂದ ತಡೆಹಿಡಿದ ದನಾಗಮನವಾಗಲಿದ್ದು ಕೈಗೆ ಸಿಗಲು ಕಾಯಬೇಕಾಗಬಹುದು. ಸಂತಸದ ದಿನ 
 
ಮಕರ;. ಮಹತ್ವದ ಸಂಗತಿ, ಘಟನೆಯೊಂದು ಅದರಷ್ಟಕ್ಕೇ ಘಠಿಸಲಿದ್ದು, ಮಹತ್ವದ್ದೇ ಆಗಿದೆ, ಎಚ್ಚರಿಕೆಯಿಂದ ವ್ಯವಹರಿಸಿ.
 
ಕುಂಭ; ದೇವತಾರಾದನೆ, ಮನೆ ಮಂದಿರದಲ್ಲಿ ದೇವತಾರಾಧನೆ ನಡೆಯಲಿದ್ದು , ನೆಮ್ಮದಿಯನ್ನು ಕಾಣುವ ಹಂಬಲದಿಂದ ಶಾಂತವಾಗಿರಿ.
 
ಮೀನ; ಅಕಸ್ಮಾತ್ ಲಾಭ.ನಿರೀಕ್ಷೆ ಮಾಡದೇ ಲಾಭ, ಸಂತಸವನ್ನು ತಾಳಿಕೊಳ್ಳಿ, ಗುಟ್ಟು ಬಿಟ್ಟರೆ ಕೆಟ್ಟೆ ಎಂದು ನೆನಪಿಟ್ಟುಕೊಳ್ಳಿ, ಶುಭ ದಿನ 

Share this Story:

Follow Webdunia kannada

ಮುಂದಿನ ಸುದ್ದಿ

ಅಷಾಢ ಮಾಸದ ಏಕಾದಶಿಯಂದು ವ್ರತ ಮಾಡುವುದರಿಂದ ಆಗುವ ಲಾಭವೇನು ಗೊತ್ತೇ?