Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (07:17 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇಂದು ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬಸದಸ್ಯರೊಂದಿಗೆ ಪ್ರಯಾಣಕ್ಕೆ ತೆರಳಿದ್ದು, ಇದು  ನಿಮಗೆ ಸಂತಸವನ್ನು ನೀಡುತ್ತದೆ.
*ವೃಷಭ ರಾಶಿ: ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಪಡೆಯಲು ಇಂದು ಉತ್ತಮವಾದ ದಿನವಾದ್ದರಿಂದ ಇಂದು ಅದಕ್ಕಾಗಿ ಹೆಚ್ಚು ಶ್ರಮಿಸುವ ಅಗತ್ಯವಿದೆ.
*ಮಿಥುನ ರಾಶಿ : ಈ ದಿನ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಅನಿರೀಕ್ಷಿತ ಮೂಲಗಳಿಂದ ಪ್ರಮುಖ ಆಮಂತ್ರವನ್ನು ಸ್ವೀಕರಿಸುತ್ತೀರಿ.
*ಕಟಕ ರಾಶಿ : ನಿಮ್ಮ ಸಭ್ಯ ನಡವಳಿಕೆಗೆ ಮೆಚ್ಚುಗೆ ಸಿಗುತ್ತದೆ. ಅನೇಕರು ನಿಮ್ಮನ್ನು ಹೊಗಳುತ್ತಾರೆ.
*ಸಿಂಹ ರಾಶಿ : ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ.
*ಕನ್ಯಾ ರಾಶಿ : ನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಆದರೆ ಇಂದು ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ.
*ತುಲಾ ರಾಶಿ : ನಿಮ್ಮ ಹಳೆಯ ಸ್ನೇಹಿತ ನಿಮ್ಮ ಬಳಿ ಹಣವನ್ನು ಕೇಳಬಹುದು. ನೀವು ಅವರಿಗೆ ಸಹಾಯ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ತೊಂದರೆಗೊಳಗಾಗಬಹುದು.
*ವೃಶ್ಚಿಕ ರಾಶಿ : ಇಂದು  ನಿಮ್ಮ  ಆಪ್ತರೊಂದಿಗೆ ಜಗಳವಾಗಬಹುದು ಮತ್ತು ವಿಷಯ ನ್ಯಾಯಾಲಯದ ಕಚೇರಿಯವರೆಗೂ ಹೋಗಬಹುದು. 
*ಧನು ರಾಶಿ : ಗುಂಪಿನಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಮನರಂಜನಾತ್ಮಕವಾಗಿದ್ದರೂ ಕೂಡ ಖರ್ಚುಗಳು ಹೆಚ್ಚಾಗುತ್ತವೆ.
*ಮಕರ ರಾಶಿ : ನಿಮ್ಮ ದಿಟ್ಟ ಮತ್ತು ನಿರ್ಭಯ ಅಭಿಪ್ರಾಯಗಳು ನಿಮ್ಮ ಸ್ನೇಹಿತನ ಆತ್ಮಗೌರವವನ್ನು ಹಾನಿ ಮಾಡಬಹುದು.
*ಕುಂಭ ರಾಶಿ : ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು. ಮತ್ತು ನೀವು ಹಣದಿಂದ ಲಾಭ ಪಡೆಯಬಹುದು.
* ಮೀನ ರಾಶಿ : ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ಶಿಶುವಿನ ಾರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟಗಳು ನಿವಾರಣೆಯಾಗಲು ಆಂಜನೇಯ ಸ್ವಾಮಿಗೆ ಈ 2 ಹರಕೆಗಳನ್ನು ಹೊತ್ತುಕೊಳ್ಳಿ