Webdunia - Bharat's app for daily news and videos

Install App

ಗಣೇಶನ ದೇಹದ ಪ್ರತಿಯೊಂದು ಅವಯವಕ್ಕೂ ಅರ್ಥವಿದೆ

Krishnaveni K
ಶನಿವಾರ, 7 ಸೆಪ್ಟಂಬರ್ 2024 (08:29 IST)
ಬೆಂಗಳೂರು: ಗಣೇಶ ಎಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅದೇನೋ ಪ್ರೀತಿ, ನಮ್ಮ ಮನೆಯವನೇ ಎಂಬ ಭಾವದಿಂದ ಪೂಜೆ ಮಾಡುತ್ತಾರೆ. ಗಣೇಶನಿಗೆ ದೇವಾದಿದೇವತೆಗಳಲ್ಲಿ ಅಷ್ಟೊಂದು ಆದ್ಯತೆ ಇರುವುದಕ್ಕೆ ಕಾರಣವೂ ಇದೆ. ಅವನ ದೇಹದ ಪ್ರತಿಯೊಂದು ಅಂಗಾಂಗಕ್ಕೂ ವಿಶೇಷ ಅರ್ಥವಿದೆ.

ಗಣೇಶನ ತಲೆ: ಗಣಪತಿ ದೇವರಿಗೆ ದೊಡ್ಡ ತಲೆಯಿದೆ. ಅದಕ್ಕೆ ವಿಶೇಷ ಅರ್ಥವೂ ಇದೆ. ಗಣೇಶನನ್ನು ವಿದ್ಯಾಧಿಪತಿ ಎಂದು ಪರಿಗಣಿಸುತ್ತಾರೆ. ಆತ ಅಪಾರ ಬುದ್ಧಿವಂತ ದೇವರು. ಹೀಗಾಗಿಯೇ ಅವನ ತಲೆ ಅಪಾರ ಜ್ಞಾನವನ್ನು ಸೂಚಿಸುತ್ತದೆ.

ಗಣೇಶನ ಕಿವಿಗಳು: ಕರಿವದನ ಗಣೇಶನಿಗೆ ದೊಡ್ಡ ಕಿವಿಗಳಿವೆ. ಅವನ ಎರಡು ಅಗಲವಾದ ಕಿವಿಗಳು ನಾವು ಒಳ್ಳೆಯದನ್ನು ಹೆಚ್ಚು ಹೆಚ್ಚು ಆಲಿಸಬೇಕು. ಉತ್ತಮ ಕೇಳುಗರಾಗಬೇಕು ಎಂಬುದನ್ನು ಸೂಚಿಸುತ್ತದೆ.

ಗಣೇಶನ ಬಾಯಿ: ದೊಡ್ಡ ಕಿವಿಗಳಿರುವ ಗಣೇಶನಿಗೆ ಬಾಯಿಗಳು ಮಾತ್ರ ಪುಟ್ಟದಾಗಿವೆ. ಅದರ ಅರ್ಥ ಹೆಚ್ಚು ಕೇಳಿ, ಆದರೆ ಕಡಿಮೆ ಮಾತನಾಡಿ ಎಂದಾಗಿದೆ.
ಗಣೇಶನ ಉದರ: ಗಣೇಶನನ್ನು ದೊಡ್ಡ ಹೊಟ್ಟೆಯವನು ಎಂದು ತಮಾಷೆ ಮಾಡುತ್ತಾರೆ. ಆದರೆ ಇದರ ಅರ್ಥ ಹಾಗಲ್ಲ. ಜೀವನದಲ್ಲಿ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸಿ ಜೀರ್ಣಿಸಿಕೊಳ್ಳಬೇಕು ಎಂದಾಗಿದೆ.
ಗಣೇಶನ ನಾಲ್ಕು ಕೈಗಳು: ಮೊದಲನೆಯ ಕೈ ಬಂಧ, ಆಸೆ, ನೋವುಗಳನ್ನು ಬೇರ್ಪಡಿಸುವ ಸಂಕೇತವಾಗಿದೆ. ಎರಡನೆಯ ಕೈ ಮಾನವ ವಿಕಾಸದ ಸಂಕೇತವಾಗಿದೆ. ಮೂರನೆಯ ಕೈ ಆಧ್ಯಾತ್ಮಿಕತೆಯ ಸಂಕೇತವಾಗಿದೆ. ನಾಲ್ಕನೆಯ ಕೈ ಭಕ್ತಿ, ಮಾಧುರ್ಯದ ಸಂಕೇತವಾಗಿದೆ.
ಗಣೇಶನ ಕಾಲುಗಳು: ಗಣೇಶನ ಕಾಲುಗಳೂ ಆಧ್ಯಾತ್ಮಿಕತೆ, ಅರಿವಿನ ಸಂಕೇತವಾಗಿದೆ.
ಗಣೇಶನ ಏಕದಂತ: ಗಣೇಶ ಎಂದರೆ ಏಕದಂತ ಎಂದೇ ಹೆಸರು ವಾಸಿ. ಇದು ಕೆಟ್ಟದನ್ನು ಹೊಸಕಿ ಹಾಕಿ ಒಳ್ಳೆಯದನ್ನು ಸ್ವೀಕರಿಸುವುದರ ಸಂಕೇತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ವಿದ್ಯೆ ತಲೆಗೆ ಹತ್ತದಿರಲು ಯಾವ ದೋಷ ಕಾರಣ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮನೆಯ ಮುಂಭಾಗದಲ್ಲಿ ಈ ಕೆಲವು ಗಿಡಗಳಿದ್ದರೆ ದರಿದ್ರ ತಪ್ಪಿದ್ದಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವಿ ಚಂದ್ರಘಂಟಾ ಮಂತ್ರ ಓದುವುದರಿಂದ ನಿಮಗೆ ಈ ಫಲಗಳು ಸಿಗುತ್ತವೆ

ಮುಂದಿನ ಸುದ್ದಿ
Show comments