Select Your Language

Notifications

webdunia
webdunia
webdunia
webdunia

ಈ ರಾಶಿಯಲ್ಲಿ ಜನಿಸಿದವರು ಕಠಿಣ ಶ್ರಮದಿಂದ ಅದೃಷ್ಟವಂತರಾಗಿರುತ್ತಾರಂತೆ

ಈ ರಾಶಿಯಲ್ಲಿ ಜನಿಸಿದವರು ಕಠಿಣ ಶ್ರಮದಿಂದ ಅದೃಷ್ಟವಂತರಾಗಿರುತ್ತಾರಂತೆ
ಬೆಂಗಳೂರು , ಶುಕ್ರವಾರ, 9 ಏಪ್ರಿಲ್ 2021 (06:29 IST)
ಬೆಂಗಳೂರು : ಕೆಲವರು ಅದೃಷ್ಟದಿಂದ ಶ್ರೀಮಂತರಾಗುತ್ತಾರೆ. ಇನ್ನೂ ಕೆಲವರು ಕಠಿಣ ಶ್ರಮದಿಂದ ಯಶಸ್ಸನ್ನು ಗಳಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿ ಜನಿಸಿದವರು ಕಠಿಣ ಶ್ರಮದಿಂದ ಅದೃಷ್ಟವಂತರಾಗಿರುತ್ತಾರಂತೆ.

*ಮೇಷ ರಾಶಿ : ಇವರು ತುಂಬಾ ಅದೃಷ್ಟಶಾಲಿಗಳು, ಇವರ  ರಾಶಿಚಕ್ರದ ಮೇಲೆ ಮಂಗಳ ಗ್ರಹದ ಆಶೀರ್ವಾದವಿರುತ್ತದೆಯಂತೆ. ಇವರು ಕಡಿಮೆ ಶ್ರಮದಿಂದ ಯಶಸ್ಸನ್ನು ಗಳಿಸುತ್ತಾರಂತೆ. ಇವರು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.

*ವೃಶ್ಚಿಕ ರಾಶಿ: ಈ ರಾಶಿ ಚಕ್ರದ ಮೇಲೆ ಮಂಗಳ ಗ್ರಹದ ಅನುಗ್ರಹವಿದೆ. ಈ ಜನರು ಧೈರ್ಯಶಾಲಿಗಳಾಗಿರುತ್ತಾರೆ. ಇವರು ಪ್ರತಿಯೊಂದು ಕಾರ್ಯವನ್ನು ಯೋಚಿಸಿ ಮಾಡುತ್ತಾರೆ. ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ.

*ಮಕರ ರಾಶಿ : ಈ ರಾಶಿಚಕ್ರದ ಮೇಲೆ ಶನಿದೇವನ ಅನುಗ್ರಹವಿರುತ್ತದೆ. ಹಾಗಾಗಿ ಕಠಿಣ ಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತಾರೆ. ಇವರು ಪ್ರತಿಯೊಂದು ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂದು ಬಯಸುತ್ತಾರೆ.

*ಕುಂಭ ರಾಶಿ : ಈ ಗ್ರಹಕ್ಕೆ ಶನಿ ಅಧಿಪತಿಯಾಗಿರುವುದರಿಂದ ಇವರಿಗೆ ಶನಿದೇವನ ಅನುಗ್ರಹವಿರುತ್ತದೆ. ಇವರು ಸರಳ ಮತ್ತು ಕಠಿಣ ಕೆಲಸ ಮಾಡುವವರು. ಇವರು ಬುದ್ಧಿವಂತಿಕೆ ಬಳಸಿಕೊಂಡು ಯಶಸ್ಸನ್ನು ಸಾಧಿಸುತ್ತಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ