Select Your Language

Notifications

webdunia
webdunia
webdunia
webdunia

ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತದೆಯಂತೆ

ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತದೆಯಂತೆ
ಬೆಂಗಳೂರು , ಸೋಮವಾರ, 17 ಸೆಪ್ಟಂಬರ್ 2018 (12:35 IST)
ಬೆಂಗಳೂರು : ಕೆಲವರು ಅನೇಕ ಪಾಪ ಕರ್ಮಗಳನ್ನು ಮಾಡಿರುತ್ತಾರೆ. ನಂತರ ಅದರ  ಪರಿಹಾರಕ್ಕಾಗಿ ದೇವರಿಗೆ ವ್ರತ, ಪೂಜೆಗಳನ್ನು ಮಾಡುತ್ತಾರೆ. ಆದರೆ ಹೀಗೆ ಮಾಡಿದರೆ ಪಾಪಕರ್ಮಗಳು ದೂರವಾಗುವುದಿಲ್ಲ. ಅದಕ್ಕೆ ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತವೆ ಎಂದು ಮಹಾಭಾರತದ ಒಂದು ಶ್ಲೋಕದಲ್ಲಿ ತಿಳಿಸಲಾಗಿದೆ.


*ಶ್ರದ್ಧಾ ಪಕ್ಷದಲ್ಲಿ ಪಿತೃಗಳಿಗೆ ಭೋಜನ ನೀಡುವುದರಿಂದ ಪಿತೃಗಳಿಗೆ ತೃಪ್ತಿ ಸಿಗುತ್ತದೆ. ಹಾಗೇ ಶ್ರದ್ಧಾ ಪಕ್ಷದಂದು ಪೂರ್ಣ ಶ್ರದ್ಧಾ ಭಕ್ತಿಯಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸುತ್ತಾರೋ ಅವರ ಕಷ್ಟಗಳೆಲ್ಲಾ ದೂರವಾಗುತ್ತದೆ.


*ಪಂಡಿತರು, ಖುಷಿಮುನಿಗಳಿಗೆ ಭೋಜನ ನೀಡುವುದು ಪುಣ್ಯದ ಕಾರ್ಯ ಎನ್ನಲಾಗುತ್ತದೆ. ಯಾರು ಪಂಡಿತರಿಗೆ ಖುಷಿಗಳಿಗೆ ಭೋಜನ ನೀಡುತ್ತಾರೋ ಅವರಿಗೆ ತಮ್ಮ ಎಲ್ಲಾ ಕೆಲಸದಲ್ಲೂ ಸಫಲತೆ ದೊರೆಯುತ್ತದೆ. ಪಾಪಗಳಿಗೆ ಪ್ರಾಯಶ್ಚಿತ ದೊರೆಯುತ್ತದಂತೆ.


*ಅತಿಥಿಗಳು ದೇವರಿಗೆ ಸಮಾನ ಎನ್ನಲಾಗುತ್ತದೆ. ಯಾವ ಮನೆಯಲ್ಲಿ ಅತಿಥಿಗಳ ಸಮ್ಮಾನವನ್ನು ಚೆನ್ನಾಗಿ ಮಾಡಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.

*ಬಹುತೇಕರು ಬಿಕ್ಷುಕರನ್ನು, ಮನೆ ಮಠ ಇಲ್ಲದವರನ್ನು ಕೀಳಾಗಿ ಕಾಣುತ್ತಾರೆ. ಯಾರು ಅಂತಹವರನ್ನು ಪ್ರೀತಿಯಿಂದ ಕಂಡು ಅವರಿಗೆ ಆಹಾರ ನೀಡುತ್ತಾರೋ ಅಂತಹವರಿಗೆ ಸಮಾಜದಲ್ಲಿ ಸ್ಥಾನ ಮಾನ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ನಿಮ್ಮ ರಾಶಿ ಭವಿಷ್ಯ