Webdunia - Bharat's app for daily news and videos

Install App

ರಥಸಪ್ತಮಿ ದಿನ ಈ ಕೆಲಸಗಳನ್ನು ಮಾಡಿದರೆ ನಿಮಗೆ ಶ್ರೇಯಸ್ಕರ

Webdunia
ಶನಿವಾರ, 28 ಏಪ್ರಿಲ್ 2018 (14:28 IST)
ಹಿಂದೂಗಳು ಮಾಘ ಶುದ್ಧ ಸಪ್ತಮಿ ದಿನ ರಥಸಪ್ತಮಿ ಆಚರಿಸುತ್ತಾರೆ. ಸಕಲ ಜಗತ್ತಿಗೆ ಬೆಳಕು ನೀಡುವ ಸೂರ್ಯನು ರಥವನ್ನು ಹತ್ತಿ ತನ್ನ ದಿಕ್ಕನ್ನು ಬದಲಾಯಿಸಿಕೊಳ್ಳುವ ದಿನವೇ ರಥಸಪ್ತಮಿ. ಮಾಘಶುದ್ಧ ಸಪ್ತಮಿ ದಿನ ಸೂರ್ಯ ಭಗವಂತ ಆವಿರ್ಭಸಿದ ಎಂದೂ, ಆ ದಿನವನ್ನೇ ಅವರು ಹುಟ್ಟಿದ ದಿನವಾಗಿ ಸಹ ಹೇಳುತ್ತಾರೆ.
ಅಷ್ಟು ಪವಿತ್ರವಾದ ದಿನ ಈ ಕೆಲಸಗಳನ್ನು ಮಾಡುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ಅಷ್ಟೇ ಅಲ್ಲ ದೀರ್ಘಕಾಲಿಕ ಸಮಸ್ಯೆಗಳಿಂದ ಸಹ ಉಪಶಮನ ಲಭಿಸಲಿದೆ.
 
*ರಥಸಪ್ತಮಿ ಮೊದಲ ದಿನ ರಾತ್ರಿ ಉಪವಾಸ ಇದ್ದು ಬೆಳಗ್ಗೆ ಸೂರ್ಯೋದಕ್ಕೆ ಮೊದಲೇ ಎದ್ದು ಸ್ನಾನ ಮಾಡಬೇಕು.
 
*ಪುರುಷರು ಏಳು ಎಕ್ಕದ ಎಲೆ, ಮಹಿಳೆಯರು ಏಳು ಹುರುಳಿ ಎಲೆಗಳನ್ನು ತಲೆ, ಭುಜದ ಮೇಲೆ ಇಟ್ಟುಕೊಂಡು(|| ಜನನೀತ್ವಂ ಹಿ ಲೋಕಾನಂ ಸಪ್ತಮಿ ಸಪ್ತಸಪ್ತಿಕೇ, ಸಪ್ತವ್ಯಾಹೃತಿಕೇ ದೇವಿ! ಸಮಸ್ತೆ ಸೂರ್ಯಮಾತೃಕೆ||)ಈ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡಬೇಕು.
 
*ರಥ ಸಪ್ತಮಿ ದಿನ ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡುವುದು ಶ್ರೇಯಸ್ಕರ.
 
*ರಥ ಸಪ್ತಮಿದಿನ ಸೂರ್ಯನ ಕಿರಣಗಳು ಬೀಳುವ ಕಡೆ ಪೂರ್ವ ದಿಕ್ಕಿನಲ್ಲಿ ತುಳಸಿಕಟ್ಟೆ ಪಕ್ಕದಲ್ಲಿ ಹಸುವಿನ ಸಗಣಿಯಿಂದ ಸಾರಿಸಿ, ಅದರ ಮೇಲೆ ರಂಗೋಲಿ ಹಾಕಿ, ಒಲೆ ಇಟ್ಟು ಹೊತ್ತಿಸಿ, ಹಾಲು ಉಕ್ಕಿಸಿ, ಆ ಹಾಲಿನಲ್ಲಿ ಹೊಸ ಅಕ್ಕಿ, ಬೆಲ್ಲ, ತುಪ್ಪ, ಏಲಕ್ಕಿ ಹಾಕಿ ಪರಮಾನ್ನ ತಯಾರಿಸಿದರೆ ಒಳಿತಾಗುತ್ತದೆ.
 
*ತುಳಸಿ ಕಟ್ಟೆ ಎದುರಿಗೆ ಹುರುಳಿ ಕಾಯಲ್ಲಿ ರಥ ಮಾಡಿ ಹುರಳಿ ಎಲೆಗಳ ಮೇಲೆ ಪರಮಾನ್ನ ಇಟ್ಟು ದೇವರಿಗೆ ನೈವೇದ್ಯ ಸಮರ್ಪಿಸಬೇಕು.
 
*ರಥಸಪ್ತಮಿ ದಿನ ದೇವರಿಗೆ ಕೆಂಪು ಗುಲಾಬಿ ಹೂಗಳಿಂದ ಪೂಜಿಸಿದರೆ ಒಳಿತು. ಎಳ್ಳುಂಡೆಗಳನ್ನು ದಾನ ನೀಡಿದರೆ ಸಕಲ ಶುಭಗಳು ಉಂಟಾಗುತ್ತವೆ
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments