Select Your Language

Notifications

webdunia
webdunia
webdunia
webdunia

ಜಾತಕದೋಷದಿಂದ ದಂಪತಿಗಳ ನಡುವೆ ಕಲಹವಾಗುತ್ತಿದ್ದರೆ, ಅದಕ್ಕೆ ಪರಿಹಾರ ಇಲ್ಲಿದೆ

ಜಾತಕದೋಷದಿಂದ ದಂಪತಿಗಳ ನಡುವೆ ಕಲಹವಾಗುತ್ತಿದ್ದರೆ, ಅದಕ್ಕೆ ಪರಿಹಾರ ಇಲ್ಲಿದೆ
ಬೆಂಗಳೂರು , ಸೋಮವಾರ, 26 ಆಗಸ್ಟ್ 2019 (09:42 IST)
ಬೆಂಗಳೂರು : ಗಂಡ-ಹೆಂಡತಿಯ ನಡುವೆ ಸರಸ ವಿರಸ ಸಹಜ. ಆದರೆ ಇದು ಅತಿಯಾದರೆ ಅವರ  ದಾಂಪತ್ಯ ಜೀವನಕ್ಕೆ ಕುತ್ತುಂಟಾಗಬಹುದು.  ಜಾತಕದಲ್ಲಿ ಗ್ರಹದೋಷವಿದ್ದರೆ ದಂಪತಿಗಳ ನಡುವೆ ಕಲಹ  ನಡೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದನ್ನು ನಿವಾರಿಸಲು ಹೀಗೆ ಮಾಡಿ.



ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ವಿವಾಹದ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದ ಏಳನೇ ಮನೆ ವಿವಾಹದ ಸ್ಥಾನವಾಗಿದೆ. ಈ ಮನೆಯಲ್ಲಿ ಸೂರ್ಯ, ಗುರು, ರಾಹು, ಮಂಗಳ, ಶನಿ ಪ್ರವೇಶ ಮಾಡಿದ್ದು ಅಥವಾ ಅವ್ರ ದೃಷ್ಟಿ ಬಿದ್ದಿದ್ದರೆ ವಿವಾಹದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

 

ಆದಕಾರಣ ಈ ಸಮಸ್ಯೆ ನಿವಾರಣೆಯಾಗಲು ದಂಪತಿ ಪ್ರತಿ ದಿನ ಶಿವನ ಜೊತೆ ತಾಯಿ ಪಾರ್ವತಿಯ ಪೂಜೆ ಮಾಡಬೇಕು. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆ ನಂತ್ರ ಪತ್ನಿ ಹಣೆಗೆ ಪತಿ ಸಿಂಧೂರವಿಡಬೇಕು. ಮಹಿಳೆಯಾದವಳು ಪ್ರತಿ ದಿನ ಪಾರ್ವತಿಗೆ ಕುಂಕುಮ ಅರ್ಪಿಸಿ ಪೂಜೆ ಮಾಡಬೇಕು. ಪ್ರತಿ ಗುರುವಾರ ಬಾಳೆ ಗಿಡಕ್ಕೆ ಪೂಜೆ ಮಾಡಬೇಕು. ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸಿ ವೈವಾಹಿಕ ಜೀವನದಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸಬೇಕು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಆಶ್ಲೇಷ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?