Publish Date: Thu, 07 Nov 2019 (09:41 IST)
Updated Date: Thu, 07 Nov 2019 (09:44 IST)
ಬೆಂಗಳೂರು : ಕಾರ್ತಿಕ ಮಾಸದಲ್ಲಿ ಸೂರ್ಯ ದುರ್ಬಲನಾಗುತ್ತಾನೆ. ಈ ಸಮಯದಲ್ಲಿ ಶಕ್ತಿ ಮತ್ತು ಬೆಳಕು ಎರಡೂ ದುರ್ಬಲವಾಗುತ್ತದೆ. ಈ ಸಮಯದಲ್ಲಿ ದೀಪವನ್ನು ಬೆಳಗಿಸುವುದರ ಮೂಲಕ ದೇವರು, ಶಕ್ತಿ, ಮತ್ತು ಬೆಳಕಿನೊಂದಿಗೆ ಸಂಬಂಧವನ್ನು ಸ್ಥಾಪಿಸುತ್ತಾರೆ. ಆದ್ದರಿಂದ ಈ ವೇಳೆ ಈ ತಪ್ಪುಗಳನ್ನು ಮಾಡಬಾರದು.
ಕಾರ್ತಿಕ ಮಾಸದಲ್ಲಿ ದೀಪ ಬೆಳಗುವಾಗ ಕೂದಲು ಕಟ್ಟಿರಬೇಕು. ಕೂದಲು ಬಿಚ್ಚಿಕೊಂಡಿರಬಾರದು. ಹಾಗೇ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೀಪ ಬೆಳಗಬೇಕು.
ಸಾಸಿವೆ ಎಣ್ಣೆ ದೀಪವನ್ನು ಬೆಳಗಬಾರದು. ಎಳ್ಳು ಅಥವಾ ತುಪ್ಪದ ದೀಪ ಹಚ್ಚಬೇಕು. ದೀಪವನ್ನು ಬಾಯಿಯಿಂದ ಊದಿ ಆರಿಸಬಾರದು. ಆರಿಸುವ ಅವಶ್ಯಕತೆ ಇದ್ದಾಗ ಬಟ್ಟೆಯ ಮೂಲಕ ಗಾಳಿ ಬೀಸಿ ಆರಿಸಬೇಕು.