Publish Date: Thu, 16 May 2019 (06:53 IST)
Updated Date: Thu, 16 May 2019 (06:55 IST)
ಬೆಂಗಳೂರು : ಶ್ರೀರಾಮನ ಭಕ್ತ ಹನುಮನ ಕೃಪೆಯಿದ್ದರೆ ಸಾಕು ಯಾವುದೇ ಕಷ್ಟ, ಸಂಕಷ್ಟಗಳು ಎದುರಾದ್ದರೂ ಧೂಳಿಪಟವಾಗಿ ಹೋಗಿಬಿಡುತ್ತದೆ. ಆದರೆ, ಪಂಡಿತರ ಪ್ರಕಾರ, ಕೆಲವು ಪೂಜಾ ವಿಧಾನಗಳ ಮೂಲಕ ಅಂಜನಿಪುತ್ರನನ್ನು ಪ್ರಸನ್ನಗೊಳಿಸಬೇಕು. ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ.
ಹನುಮ ಜಯಂತಿಯಂದು ಸುಂದರಕಾಂಡ, ಹನುಮನಾಷ್ಟಕ, ಬಜರಂಗ ಬಾಣ ಪಠಿಸುವುದರಿಂದ ಪಾಪ ಪರಿಹಾರವಾಗುತ್ತದೆ. ಈ ದಿನ ಹನುಮನಿಗೆ ದೇಶಿ ತುಪ್ಪದಿಂದ ಮಾಡಿದ ರೊಟ್ಟಿ ಸಮರ್ಪಿಸಬೇಕು. ಹನುಮನಿಗೆ ಸಿಂಧೂರ ಬಣ್ಣದ ದೋತಿ ತೊಡಿಸಬೇಕು. ಮನೆಯ ಮಂದಿರದ ಛಾವಣಿ ಮೇಲೆ ಕೆಂಪು ಬಣ್ಣದ ಧ್ವಜ ಹಾರಿಸುವುದರಿಂದ ಆಕಸ್ಮಿಕ ಸಂಕಷ್ಟದಿಂದ ಪಾರಾಗಬಹುದು. ಪರಿವಾರದ ಯೋಗಕ್ಷೆಮಕ್ಕಾಗಿ ಹನುಮನಿಗೆ ಮಲ್ಲಿಗೆ ಹೂ ಅರ್ಪಿಸಬೇಕು.
ಅಲ್ಲದೇ ಸರ್ವ ಸಿದ್ದಿಗಾಗಿ ಬಜರಂಗ ಬಲಿಗೆ ಕೇಸರಿ ಯುಕ್ತ ನೀರಿನಿಂದ ಅಭಿಷೇಕ ಮಾಡಿಸಬೇಕು. ಪ್ರಸಿದ್ದಿಗಾಗಿ ಹನುಮನ ಗಧೆಗೆ ಸಿಂಧೂರ ಅಥವಾ ಗೋಮಾತೆಯ ತುಪ್ಪ ಹಚ್ಚಬೇಕು. ಹನುಮ ಜಯಂತಿಯ ದಿನ ರಕ್ತದಾನ ಮಾಡುವುದರಿಂದ ದುರ್ಘಟನೆಗಳಿಂದ ಪಾರಾಗಬಹುದು. ಈ ದಿನ ರೋಗಿಯ ಸೇವೆ ಮಾಡುವುದರಿಂದ ಜೀವನ ಪೂರ್ತಿ ನಿರೋಗಿಯಾಗಿರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.