Webdunia - Bharat's app for daily news and videos

Install App

ಆತಂಕ ದೂರ ಮಾಡಿ ಮನಸ್ಸು ಶಾಂತಗೊಳಿಸುವ ದೇವಿ ಮಂತ್ರ

Krishnaveni K
ಬುಧವಾರ, 5 ಫೆಬ್ರವರಿ 2025 (08:42 IST)
Photo Credit: X
ಬೆಂಗಳೂರು: ಇಂದಿನ ಒತ್ತಡದ ಜೀವನದಲ್ಲಿ ಮನಸ್ಸು ಆತಂಕ, ಭಯದಿಂದ ಬಳಲುತ್ತಿದ್ದರೆ ಶಾಂತಗೊಳಿಸಲು ದೇವಿ ಮಂತ್ರವನ್ನು ತಪ್ಪದೇ ಜಪಿಸಬೇಕು.

ದೇವಿಯು ತಾಯಿಯ ಸ್ವರೂಪ. ದುರ್ಗಾ ದೇವಿಯು ಶಕ್ತಿ, ಚೈತನ್ಯ, ಧೈರ್ಯದ ಜೊತೆಗೆ ನಮ್ಮನ್ನು ಅಮ್ಮನಾಗಿ ಸಲಹುತ್ತಾಳೆ. ದೇವಿಯ ಕುರಿತು ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗುತ್ತದೆ.

ಕೆಲವರು ಕಾರಣವಿಲ್ಲದೇ ಆತಂಕ, ಒತ್ತಡಗಳಿಂದ ಬಳಲುತ್ತಿರುತ್ತಾರೆ. ಶತ್ರು ಭಯ, ವೈಫಲ್ಯದ ಭಯ ಹೀಗೆ ಏನೋ ಚಿಂತೆ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಮನಸ್ಸು ಶಾಂತಗೊಳಿಸಲು ದುರ್ಗಾದೇವಿಯ ಈ ಮಂತ್ರವನ್ನು ಜಪಿಸುವುದು ಉತ್ತಮ.

ಓಂ ಸರ್ವ ಸ್ವರೂಪೆ ಸರ್ವೇಶೆ, ಸರ್ವಶಕ್ತಿ ಸಮನ್ವಿತೆ
ಭಯೇ ಭಯಸ್ತ್ರಾಹಿ ನೋ ದೇವಿ, ದುರ್ಗೇ ದೇವಿ ನಮೋಸ್ತುತೆ

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಈ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಜಪಿಸುವುದು ಉತ್ತಮ. ಭಯವನ್ನು ನಾಶ ಮಾಡುವ ದೇವಿಯೇ ನಿನಗೆ ನನ್ನ ನಮಸ್ಕಾರಗಳು ಎಂಬುದು ಇದರ ಅರ್ಥವಾಗಿದೆ. ಇದನ್ನು ಓದುವುದರಿಂದ ಮನಸ್ಸಿನ ಉದ್ವೇಗಗಳು ಕಡಿಮೆಯಾಗಿ ಶಾಂತಚಿತ್ತರಾಗುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಮುಂದಿನ ಸುದ್ದಿ
Show comments