Select Your Language

Notifications

webdunia
webdunia
webdunia
webdunia

ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚಿಸಲು, ಭಯ ದೂರ ಮಾಡಲು ಈ ಮಂತ್ರ ಪಠಿಸಲು ಹೇಳಿ

Hanuman

Krishnaveni K

ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2024 (08:42 IST)
ಬೆಂಗಳೂರು: ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದಬೇಕು, ಏನಾದರೂ ಸಾಧನೆ ಮಾಡಬೇಕು ಎಂದರೆ ಅವರಲ್ಲಿ ಸ್ಮರಣ ಶಕ್ತಿ ಚೆನ್ನಾಗಿರಬೇಕು ಮತ್ತು ಭಯ ದೂರವಾಗಬೇಕು. ಇವೆರಡಕ್ಕೂ ಸಲ್ಲುವಂತಹ ಮಂತ್ರವೊಂದರ ಬಗ್ಗೆ ತಿಳಿದುಕೊಳ್ಳಿ.

ಆಂಜನೇಯ ಸ್ವಾಮಿ ನಮ್ಮಲ್ಲಿ ಭಯ ದೂರ ಮಾಡಿ ಹೊಸದನ್ನು ಸಾಧಿಸಲು, ಕಲಿಯುವ ಉತ್ಸಾಹ ಕೊಡುವನಲ್ಲದೆ, ಕೀರ್ತಿವಂತನಾಗಿ ಮಾಡುತ್ತಾನೆ. ಹಾಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಹನುಮನ ಮಂತ್ರವನ್ನು ಪಠಿಸುವುದನ್ನು ಹೇಳಿಕೊಡಿ. ಅದರಲ್ಲೂ ವಿಶೇಷವಾಗಿ ಈ ಶ್ಲೋಕ ಪಠಿಸಲು ಹೇಳಿ. ಅದು ಹೀಗಿದೆ:

ಅತುಲಿತಬಲಧಾಮಂ ಹೇಮಶೈಲಾಭದೇಹಂ ಅನುಜವಾನಕೃಷಾನುಂ ಜ್ಞಾನಾಮಗ್ರಗಣ್ಯಂ
ಸಕಲಗುಣನಿಧಾನಂ ವಾನರಾಣಾಮಧೀಶಂ, ರಘುಪತಿಪ್ರಿಯಭಕ್ತಂ ವಾತಜಾತಂ ನಮಾಮಿ
ಮನೋಜನವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಧ ಮುಖ್ಯಂ ಶ್ರೀರಾಮ ಧೂತಂ ಶರಣಂ ಪ್ರಪದ್ಯೇ

ಈ ಮಂತ್ರವನ್ನು ಮಕ್ಕಳು ಪ್ರತಿನಿತ್ಯ ಪಠಿಸುವುದರಿಂದ ಅವರ ಏಕಾಗ್ರತೆ ಹೆಚ್ಚುವುದಲ್ಲದೆ, ಮನಸ್ಸಿನಲ್ಲಿರುವ ಭಯ ನಾಶವಾಗಿ ಹೊಸದನ್ನು ಸಾಧಿಸುವ ಉತ್ಸಾಹ ಮೂಡುತ್ತದೆ. ಅಲ್ಲದೆ, ಅವರು ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಕೀರ್ತಿವಂತರಾಗುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?