Webdunia - Bharat's app for daily news and videos

Install App

ಮಹಾವಿಷ್ಣುವಿನ ಈ ಒಂದು ಮಂತ್ರ ಹೇಳಿದರೆ ಅನಾರೋಗ್ಯ ಸಮಸ್ಯೆಗೆ ಮುಕ್ತಿ

Krishnaveni K
ಗುರುವಾರ, 26 ಸೆಪ್ಟಂಬರ್ 2024 (08:24 IST)
ಬೆಂಗಳೂರು: ಕೆಲವೊಮ್ಮೆ ಎಷ್ಟೇ ಔಷಧೋಪಚಾರ ಮಾಡಿದರೂ ರೋಗ ವಾಸಿಯಾಗದೇ ಇದ್ದಾಗ ದೇವರ ಮೊರೆ ಹೋಗಬೇಕಾಗುತ್ತದೆ. ಇಂದು ಅನಾರೋಗ್ಯ ಸಮಸ್ಯೆ ಮುಕ್ತಿಗೆ ಮಹಾವಿಷ್ಣುವಿನ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ.

ಧನ್ವಂತರಿ ಎಂದರೆ ದೇವರುಗಳ ವೈದ್ಯನೆಂದೇ ಪ್ರಖ್ಯಾತಿ. ಧನ್ವಂತರಿ ಬೇರೆ ಯಾರೂ ಅಲ್ಲ. ಆ ಮಹಾವಿಷ್ಣುವೇ ದೇವತೆಗಳ ರೋಗ ವಾಸಿ ಮಾಡಲು ಧನ್ವಂತರಿ ರೂಪದಲ್ಲಿ ಜನ್ಮ ತಾಳಿದ ಎಂದು ಪುರಾಣಗಳು ಹೇಳುತ್ತವೆ. ಇಂದಿಗೂ  ವೈದ್ಯರ ರೂಪದಲ್ಲಿ ಧನ್ವಂತರೀ ದೇವರು ನಮ್ಮನ್ನು ರಕ್ಷಿಸುತ್ತಿದ್ದಾನೆ ಎನ್ನಬಹುದು.

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮಹಾವಿಷ್ಣುವಿನ ಈ ಧನ್ವಂತರೀ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಅದು ಹೀಗಿದೆ:
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ
ಅಮೃತ ಕಲಸ ಹಸ್ತಾಯ ವಜ್ರಜಲಕೌ ಹಸ್ತಾಯ
ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ

ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ನಿಮ್ಮ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಸಕಾರಾತ್ಮಕ ಭಾವ ಮೂಡುವುದು. ದಿನೇ ದಿನೇ ನಿಮ್ಮ ಶರೀರ ಸೌಖ್ಯ ವೃದ್ಧಿಯಾಗಿ ಆರೋಗ್ಯವಂತರಾಗುವಿರಿ. ಜೊತೆಗೆ ಆ ಮಹಾವಿಷ್ಣುವಿನ ಅನುಗ್ರಹಕ್ಕೂ ಪಾತ್ರರಾಗುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments