ಗುರು ದೆಶೆ ತಿರುಗಿಬಿದ್ದರೆ ಎಂಥಾ ಕೆಟ್ಟ ಪರಿಣಾಮವಾಗುತ್ತದೆ ನೋಡಿ

Krishnaveni K
ಸೋಮವಾರ, 22 ಏಪ್ರಿಲ್ 2024 (12:04 IST)
ಬೆಂಗಳೂರು: ಗುರು ದೆಶೆ ಬಂದರೆ ಎಲ್ಲವೂ ಶುಭವಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಗುರು ದೆಶೆ ಎಲ್ಲಾ ಬಾರಿಯೂ ಒಳ್ಳೆಯದು ಮಾಡಲ್ಲ. ಗುರು ದೆಶೆಯ ಅಡ್ಡಪರಿಣಾಮವೂ ಅಷ್ಟೇ ಕೆಟ್ಟದಾಗಿರುತ್ತದೆ.

ಗುರು ದೆಶೆ ತಿರುಗಿಬಿದ್ದರೆ ಯಾವೆಲ್ಲಾ ಅಡ್ಡಪರಿಣಾಮಗಳಾಗುತ್ತವೆ ಎಂಬುದನ್ನು ನೋಡೋಣ. ಗುರುಗ್ರಹವು ದೋಷಪೂರಿತ ಮನೆಯಲ್ಲಿದ್ದರೆ ಸಾಕಷ್ಟು ಕೆಟ್ಟ ಪ್ರಭಾವಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ನಮ್ಮ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಹಿನ್ನಡೆ, ಸೋಲು ಕಂಡುಬರಬಹುದು.

ಅಷ್ಟೇ ಅಲ್ಲ, ಅನಗತ್ಯ ವಿಚಾರಗಳಿಗೆ ವಿಪರೀತ ಖರ್ಚು ಮಾಡುವುದು, ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ತಪ್ಪುವುದು ಇತ್ಯಾದಿ ಕಂಡಬರಬಹುದು. ವಿದ್ಯಾರ್ಥಿಗಳಿರಲಿ, ಉದ್ಯೋಗಸ್ಥರಿರಲಿ ತಮ್ಮ ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಸಾಧಿಸಲು ಸಾಧ‍್ಯವಾಗದೇ ಚಂಚಲ ಮನೋಭಾವ ಕಂಡುಬಂದೀತು.

ಮುಖ್ಯವಾಗಿ ಹಣಕಾಸಿನ ನಷ್ಟ, ವಿಪರೀತ ಸಾಲ ಇತ್ಯಾದಿ ಸಮಸ್ಯೆಗಳು ಎದುರಾಗಿ ಜೀವನದಲ್ಲಿ ಕಷ್ಟಗಳ ಸರಮಾಲೆ ಎದುರಿಸಬೇಕಾದೀತು. ಹೀಗಾಗಿ ಗುರುಗ್ರಹದ ಋಣಾತ್ಮಕ ಪ್ರಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಗುರು ಗ್ರಹಕ್ಕೆ ಸಂಬಂಧಪಟ್ಟ ಶ್ಲೋಕ, ಮಂತ್ರಗಳನ್ನು ಪಠಿಸಿದರೆ ಉತ್ತಮ. ಪ್ರತಿನಿತ್ಯ ‘ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ’ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments