Entertainment Regionalcinema Preview 0708 02 1070802022_1.htm

Select Your Language

Notifications

webdunia
webdunia
webdunia
webdunia

ಮತ್ತೆ ಬಂದ ಗಣೇಶ- ಸಿದ್ಧತೆ

ಕನ್ನಡ ಸಿನಿಮಾ
ನಿರ್ದೇಶಕ ಫಣಿರಾಮಚಂದ್ರ ಅವರ ಹೊಸ ಚಿತ್ರ'ಮತ್ತೆ ಬಂದ ಗಣೇಶ' ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳಲಿದ್ದು, ಇದರ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.

ಫಣಿಯವರು ಈಗಾಗಲೇ ಗಣೇಶ ಹೆಸರಿನ ಅನೇಕ ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಆದರೆ ಇದೊಂದು ವಿಭಿನ್ನ ಚಿತ್ರ ಎಂಬುದು ಗಾಂಧಿನಗರದಿಂದ ಲಭಿಸಿದ ಮಾಹಿತಿ.

ಹೊಸ ಚಿತ್ರದಲ್ಲಿ ವಿಜಯರಾಘವೇಂದ್ರ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ. ಇತರ ತಾರಾಗಣವೆಂದರೆ ವಿಶಾಲ್ ಹೆಗ್ಡೆ, ನೀತು, ಕೋಮಲ್ ಕುಮಾರ್, ಶರಣ್ ಮುಂತಾದವರಾಗಿದ್ದಾರೆ.

ಸೆಪ್ಟೆಂಬರ್ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗುವ ಗಣೇಶ.. ಚಿತ್ರಕ್ಕಾಗಿ ಹಂಸಲೇಖ ಸಂಗೀತ ನೀಡಲಿದ್ದಾರೆ.

Share this Story:

Follow Webdunia kannada