Astrology Yearly Horoscope Details

Select Your Language

Notifications

webdunia
webdunia
webdunia
webdunia

ಜಾತಕ

ಧನು
ಧನುರಾಶಿ:-ಗುರುವು ಈ ಸಮಯದಲ್ಲಿ ನಿಮ್ಮ ಜನ್ಮಾಷ್ಟಮ ರಾಶಿಯಲ್ಲಿ ಸಂಚರಿಸುತ್ತಿರುವನು. ಈ ಕಾಲದಲ್ಲಿ ದೈವಬಲವಿರದು. ಚತುರ್ಥದ ಶನಿಯೂ 9-8 ರ ಕೇತುವೂ ಅಶುಭಫಲೆದಾಯಕರು. ಆರೋಗ್ಯದಲ್ಲಿ ತೊಂದರೆಗಳು ತೋರುವುದು. ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವ್ವಹಾರಗಳಲ್ಲಿ ಸೋಲುಂಟಾಗಬಹುದು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ತೋರಬಹುದು. ಆರ್ಥಿಕವಾಗಿ ಖರ್ಚು ಹಾಗೂ ನಷ್ಟಗಳು ಉಂಟಾಗಬಹುದು. ಮನಸ್ಸು ಹೆಚ್ಚು ಚಂಚಲವಾಗಿ ನೆಮ್ಮದಿ ಕಡಿಮೆಯಾಗಬಹುದು. ಬಂಧು ಮಿತ್ರರೊಂದಿಗೆ ಅಸಮಾಧಾನಗಳು ಉಂಟಾಗಬಹುದು. ಮನಸ್ಸಿನಲ್ಲಿ ಕುಟಿಲತೆಯುಂಟಾಗದಂತೆ(ಕೆಟ್ಟ ಚಿಂತನೆ ಸತ್ಕರ್ಮಗಳನ್ನು ನಡೆಸಬೇಕು. ನರದ ತೊಂದರೆ ಹಾಗೂ ಸೊಂಟದಿಂದ ಕೆಳಗಿನಭಾಗದಲ್ಲಿ ನೋವು ಕಾಣಬಹುದು. ಗೃಹ, ವಾಹನಾದಿಗಳಲ್ಲಿ ಕೆಲವೊಂದು ಲೋಪದೋಷಗಳು ನಿಮ್ಮ ಅನುಭವಕ್ಕೆ ಬರುವುದು. ವಸ್ತುನಷ್ಟ, ಧನನಷ್ಟಾದಿಗಳೂ ಆಗುತ್ತಿರುವುದು. ವರ್ಷದ ಆರಂಭದಲ್ಲಿ ರಾಹು ತೃತೀಯದಲ್ಲಿ, ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ಭಾಗ್ಯಸ್ಥಾನದಲ್ಲಿ ಶುಭರು. ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲಗಳು ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ. ಯಥಾಶಕ್ತಿ ಶಿವಾರಾಧನೆ, ವಿಷ್ಣುಸೇವೆ, ಗಣಪತಿಸೇವೆಗಳಿಂದ ದೋಷಫಲಗಳು ಕಡಿಮೆಯಾಗುವುದು. ಸಂಸಾರದಲ್ಲಿ ಸಾಮರಸ್ಯದ ಕೊರತೆ, ಮಕ್ಕಳ ವಿಷಯವಾಗಿ ಸಮಸ್ಯೆ, ಮನಸ್ಸಿಗೆ ಕಿರಿಕಿರಿ, ನೌಕರರಿಂದ ಅಡಚಣೆ, ಅನಾರೋಗ್ಯ, ಶತ್ರುಪೀಡೆ, ಇತ್ಯಾದಿ ಎದುರಾಗುವವು. ಆರೋಗ್ಯದಲ್ಲಿ ಸುಧಾರಣೆ, ಗೃಹಸೌಕರ್ಯಪ್ರಾಪ್ತಿ, ಬಂಧುಸಹಕಾರ, ಆತ್ಮಸ್ಥೆರ್ಯ ವೃದ್ಧಿ, ಕೈಗೊಂಡ ಕಾರ್ಯಗಳಲ್ಲಿ ಜಯ, ಶತ್ರುಭಯಕಲಹಾದಿಗಳಿಂದ ಮುಕ್ತಿ ಇತ್ಯಾದಿಗಳಿರುತ್ತವೆ. ಮುಂದೆ ಅಗೋಸ್ತು 2 ರವರೆಗೂ ದೇಹಾರೋಗ್ಯದಲ್ಲಿ ಸುಧಾರಣೆ, ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಲಭ್ಯ. ಮಾತಿನಲ್ಲಿ ವಿವಾದಗಳು ಉಂಟಾದೀತು. ಕ್ರಯ ವಿಕ್ರಯೆಗಳಲ್ಲಿ ಲಾಭ. ಶತ್ರುಭಯಕಲಹಾದಿಗಳಿಂದ ಮುಕ್ತಿ, ಇತ್ಯಾದಿ ಮುಕ್ತಿ, ಇತ್ಯಾದಿ ಫಲಗಳು ಇರುತ್ತವೆ. ಈ ಮಧ್ಯೆ ಆಹಾರ, ವ್ಯತ್ಯಾಸದಿಂದ ದೇಹಾರೋಗ್ಯದಲ್ಲಿ ಏರುಪೇರು, ಮೂತ್ರಾಶಯ, ಉದರ ಹಾಗೂ ಪಿತ್ತಸಂಬಂಧೀ ವ್ಯಾಧಿಗಳ ಬಗ್ಗೆ ಜಾಗ್ರತೆವಹಿಸಿ. ಸಣ್ಣಪುಟ್ಟ ಕಾರ್ಯಗಳಲ್ಲಿ ವಿಘ್ನಗಳುಂಟಾಗುವುದು. ಸಮೀಪದ ಸಂಬಂಧಿಕರ ಅಗಲುವಿಕೆಯು ಉಂಟಾಗಬಹುದು. ಹಣದ ವ್ಯವಹಾರದಲ್ಲಿ ವಿರೋಧ ಫಲ ಇತ್ಯಾದಿ ಸಪ್ಟೆಂಬರ ರವರೆಗೂ ಇರುತ್ತವೆ. ಮುಂದೆ ನವಂಬರೆ 16 ರವರೆಗೆ ವ್ಯವಹಾರದಲ್ಲಿ ತೊಂದರೆಗಳು ಕಡಿಮೆಯಾಗುವುದು. ಹೊಸತಾದ ಯೋಜನೆಗಳ ಅನುಷ್ಠಾನಕ್ಕೆ ಕಾಲವು ಪಕ್ವವಾಗಿರುವಂತಿದೆ. ಆರ್ಥಿಕ ಉನ್ನತಿ. ಆರೋಗ್ಯವೃದ್ಧಿ, ಸ್ಥಾನಮಾನಾದ್ಯುತ್ಕರ್ಷೆ, ಅಧಿಕಾರಿವರ್ಗದವರಿಂದ ಪ್ರಯೋಜನ ಪಡೆಯುವಿರಿ. ಉದ್ಯೋಗ, ಗೃಹಕೃತ್ಯಗಳಲ್ಲಿ ತೊಂದರೆ, ಕಾರ್ಯವೈಫಲ್ಯ, ಧನಹಾನಿ, ಬುದ್ದಿಯ ಅಸ್ಥಿರತೆ ಇತ್ಯಾದಿ ಎದುರಾಗುವವು. ಮುಂದೆ ವರ್ಷಾಂತ್ಯದವರೆಗೂ ಇತರರ ಸಹಕಾರದಿಂದ ವ್ಯವಹಾರಗಳು ಉತ್ತಮಗೊಳ್ಳುವುದು. ಧನಸುವರ್ಣಾದಿಲಾಭ, ಮಕ್ಕಳಿಂದ ಶುಭಫಲ ಪ್ರಾಪ್ತವಾಗುವದು. ಆರೋಗ್ಯ ಸುಧಾರಿಸುವದು. ರಕ್ತದೋಷ, ದುರ್ಜನರ ಸಂಸರ್ಗದಿಂದ ಅಶುಭಫಲ, ಬಂಧುದುಃಖ ಎದುರಾಗುವದು.