Astrology Yearly Horoscope Details

Select Your Language

Notifications

webdunia
webdunia
webdunia
webdunia

ಜಾತಕ

ಕನ್ಯಾ
ಕನ್ಯಾರಾಶಿ:-ಲಾಭಸ್ಥಾನದ ಗುರುವು ದೈವಬಲವೊದಗಿಸುವನು. ರಾಹುಕೇತುಗಳೂ ಅನುಕೂಲರು. ಎಲ್ಲ ರೀತಿಯಲ್ಲಿ ಅನುಕೂಲಗಳು ಉಂಟಾಗುವುದು. ಗ್ರಹಿಸಿದ ಕೆಲವು ಕಾರ್ಯಗಳನ್ನು ಪ್ರಯತ್ನಿಸಿದಲ್ಲಿ ಸಿದ್ದಿಸುವುದು. ಕುಟುಂಬದಲ್ಲಿ ಹೊಸಬರ ಆಗಮನದ ಸಾಧ್ಯತೆಯಿದೆ. ಆರ್ಥಿಕವಾಗಿಯೂ ಅಭಿವೃದ್ಧಿಯು ಉಂಟಾಗುವುದು. ಉನ್ನತ ಸ್ಥಾನಮಾನಗಳು ಸಿಗುವ ಸಾಧ್ಯತೆಯಿದೆ. ಗೃಹದಲ್ಲಿ ಶುಭಸಮಾರಂಭಗಳು ನಡೆಯುವುದು. ವಿವಿಧಮೂಲಗಳಿಂದ ಧನಪ್ರಾಪ್ತಿಯಿದೆ. ಕೆಲಸಕಾರ್ಯಗಳಲ್ಲಿ ಮೊದಲಿಗಿಂತ ದಲಿಗಿಂತ ಅಧಿಕ ಉತ್ಸಾಹಿಯಾಗಿರುವಿರಿ. ಸರಿಯಾದ ಸಮ ಆರೋಗ್ಯವೂ ಸಿದ್ಧಿಸುವುದು. ವ್ಯವಹಾರದಲ್ಲಿ ಪುದು. ವ್ಯವಹಾರದಲ್ಲಿ ಜಯಸಿಗುವುದು. ಕೌಟುಂಬಿಕ ಸುಖವನ್ನು ಅನುಭವಿಸುವಿರಿ. ವರ್ಷದ ಉತ್ತರಾರ್ಧದಲ್ಲಿ ರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ವ್ಯಯಸ್ಥಾನದಲ್ಲೂ ವರ್ಷವಿಡೀ ಶನಿಯು ಸಪ್ತಮದಲ್ಲಿಯೂ ಇದ್ದು ದೇಹಾರೋಗ್ಯದಲ್ಲಿ ಅಲ್ಪ ತೊಂದರೆಗಳು ತೋರಬಹುದು. ಪತ್ನಿಗೆ ಈ ಕಾಲವು ಅನುಕೂಲಕರವಲ್ಲ. ಗ್ರಹಿಸಿದೆ ಕೆಲವೊಂದು ಕಾರ್ಯಗಳು ಸಮಯಕ್ಕೆ ನಡೆಯದು. ಹೊಟ್ಟೆಯಿಂದ ಕೆಳಭಾಗದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ದೂರ ಸ್ಥಳವನ್ನು ಸಂದರ್ಶಿಸುವ ಸಂದರ್ಭಗಳು ಉಂಟಾಗುವುದು. ಉದ್ಯೋಗದಲ್ಲಿ ಬದಲಾವಣೆ, ಸೀ ಸಂಬಂಧವಾಗಿ ತೊಂದರೆಗಳು, ವ್ಯವಹಾರ ಹಾಗೂ ಸಂಬಂಧಗಳಲ್ಲಿ ಅಸ್ಥಿರತೆ, ಆರ್ಥಿಕ ಅಡಚಣೆ, ಚಿಂತೆ ಎದುರಾದೀತು ಆಂಜನೇಯನಿಗೆ ಪವಮಾನಸೇವೆ, ವಿಷ್ಣುಸೇವೆ, ಗಣಪತಿಸೇವೆ, ಸುಬ್ರಹ್ಮಣ್ಯ ಕ್ಷೇತ್ರದರ್ಶನ ನಡೆಸುವುದರಿಂದ ಶುಭ. ದೈಹಿಕ ಆಘಾತ, ಪಿತ್ತ ಅಥವಾ ಉಷ್ಣಸಂಬಂಧೀ ತೊಂದರೆಗಳು, ವೃತ್ತಿಯಲ್ಲಿ ಅಥವಾ ವಾಸಸ್ಥಳದಲ್ಲಿ ಬದಲಾವಣೆ ಕಂಡುಬರುವುದು. ಉದ್ಯೋಗವ್ಯವಹಾರದಲ್ಲಿ ಕೆಲವು ಅನುಕೂಲಗಳು ಅನುಭವಕ್ಕೆ ಬರುವುದು. ಮುಂದೆ ಅಗೋಸ್ತು 17 -ರವರೆಗೆ ಔದ್ಯೋಗಿಕವಾಗಿಯೂ ಆರ್ಥಿಕವಾಗಿಯೂ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ಮುಂದೆ ಸಪ್ಟೆಂಬರ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ, ಮನಸ್ಸಿಗೆ ಕಿರಿಕಿರಿ, ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು ಎದುರಾದೀತು. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಇತರರಿಂದ ಸಹಕಾರವನ್ನು ಪಡೆಯುವಿರಿ. ವ್ಯವಹಾರಗಳು ಉತ್ತಮಗೊಳ್ಳುವುದು. ಕೆಟ್ಟಜನರ ಸಂಸರ್ಗದಿಂದ ಕಷ್ಟನಷ್ಟಗಳಿವೆ. ಈ ಮಧ್ಯೆ ಅಗೋಸ್ತು 2 ರಿಂದ ಕೆಲವೊಂದು ಶುಭಫಲಗಳಿದ್ದು ಮನದಲ್ಲಿರುವ ಕಾರ್ಯಗಳು ನಡೆಯುವುದಲ್ಲದೆ ಇತರರಿಂದಲೂ ಅನುಕೂಲಗಳು ಉಂಟಾಗುವುದು. ಭೂಸಂಬಂಧವಾದ ವ್ಯವಹಾರಗಳು ಸುಲಭವಾಗಿ ನಡೆಯಬಹುದು. ಉತ್ತಮ ಸ್ಥಾನಮಾನಾದಿಗಳು ದೊರಕುವುದು. ಮುಂದೆ ನವಂಭರ ರವರೆಗೆ ಪಿತ್ತ ಅಥವಾ ಉಷ್ಣಸಂಬಂಧೀ ತೊಂದರೆಗಳು ಕಂಡುಬರುವುದು. ಲೋಹ, ಬೆಂಕಿಯಲ್ಲಿ ಜಾಗ್ರತೆ ವಹಿಸಬೇಕು. ಮುಂದೆ ದಶಂಬರ ರವರೆಗೆ ಆರೋಗ್ಯ ಅಪಘಾತಾದಿಗಳ ಬಗ್ಗೆ ಎಚ್ಚರ ಅಗತ್ಯ. ಔದ್ಯೋಗಿಕ-ಆರ್ಥಿಕ ಪ್ರಗತಿ, ಸ್ಥಾನಪ್ರಾಪ್ತಿ, ಗೃಹಲಾಭ, ಇತ್ಯಾದಿ ಪ್ರಾಪ್ತವಾಗುವವು. ಕಲಹದಿಂದ-ಶತ್ರುಕೃತ ದೋಷದಿಂದ ರಾಜೋಪದ್ರವ, ಭಯ, ವಾಗೋಷ, ಧನಹಾನಿ ಇತ್ಯಾದಿಗಳಿರುತ್ತವೆ. ಮುಂದೆ ವರ್ಷಾಂತ್ಯದವರೆಗೂ ರೋಗನಿವೃತ್ತಿ, ಬಂಧುಸಹಾಯ, ಅದಾಯವೃದ್ಧಿ ಇತ್ಯಾದಿ ಶುಭಫಲಗಳಿದ್ದರೂ, ಕೊನೆಯ ಅವಧಿಯಲ್ಲಿ ಅನಾರೋಗ್ಯ, ದೈಹಿಕ ವಿಪದಾಪತ್ತುಗಳ ಸಂಭವವಿದೆ.