Astrology Yearly Horoscope Details

Select Your Language

Notifications

webdunia
webdunia
webdunia
webdunia

ಜಾತಕ

ಸಿಂಹ
ಸಿಂಹರಾಶಿ:- ವ್ಯಯಸ್ಥಾನ-ಜನ್ಮರಾಶಿಗಳ ಗುರು ಮತ್ತು ಅಷ್ಟಮದ ಶನಿಯಿಂದಾಗಿ ಈ ವರ್ಷ ದೈವಬಲವಿಲ್ಲ. ಕುಟುಂಬದಲ್ಲಿ ದುಃಖಕರ ಪ್ರಸಂಗಗಳನ್ನು ಎದುರಿಸಬೇಕಾಗುವುದು. ಸ್ವಲ್ಪ ಮಟ್ಟಿನ ಮನಸ್ತಾಪಗಳೂ ತೋರುವುದು. ಆರೋಗ್ಯಕ್ಕೂ ಉತ್ತಮವಲ್ಲ. ವಾಹನಾದಿಗಳಿಂದ ತೊಂದರೆಗಳುಂಟಾಗುವ ಸಂದರ್ಭವಿರುವುದರಿಂದ ಜಾಗ್ರತೆ ವಹಿಸಬೇಕು. ಕೃಷಿಕಾರ್ಯಗಳಲ್ಲಿ ಸ ನಷವನ್ನು ವಿಘ್ನಗಳನ್ನೂ ನೀವು ಅನುಭವಿಸುವಿರಿ. ನಿಮ್ಮಿಂದ ಕೆಳಮಟ್ಟದ ಜನರಿಂದ ತೊಂದರೆಗಳಿಗೊಳಗಾಗುವಿರಿ. ಕುಲದ ಉತಮ ಆಚರಣೆಗಳಿಂದ ಹಿಂದೆಬರುವ ಸಾಧ್ಯತೆ ಇದೆ ಕೌಟುಂಬಿಕ ಸುಖಗಳು ಕಡಿಮೆಯಾಗುವುದು. ಯಾವುದೇ ಕಾರ್ಯಗಳನ್ನು ಮಾಡುವುದಾದರೂ ಸಂಪತ್ತಿನ ನಷ್ಟ, ಕಾರ್ಯಗಳಿಗೆ ವಿಘ್ನ. ಅನಿರೀಕಿತ ಕಷಗಳು ಉಂಟಾಗುವ ಕಾಲವಾಗಿರುತ್ತದೆ. ಬಹಳ ಜಾಗ್ರತೆ ವಹಿಸಬೇಕು. ಉದ್ಯೋಗದಲ್ಲಿ ಬದಲಾವಣೆ. ಸೀ ವ್ಯವಹಾರ ಹಾ ಹಾಗೂ ಸಂಬಂಧಗಳಲ್ಲಿ ಸ್ಥಿರತೆ ಕೈಗೊಳ್ಳಲು ಬಂಧುಮಿತ್ರರಿಂದ ಒತ್ತಡ ಸ್ತ್ರೀ ಸಂಬಂಧವಾಗಿ ತೊಂದರೆಗಳು ಎದುರಿಸಬೇಕಾಗುವುದು. ಅನಗತ್ಯ ಖರ್ಚುವೆಚ್ಚಗಳೆದುರಾಗುವವು. ಕುಟುಂಬವರ್ಗದವರಿಂದ ದೂರವಿರಬೇಕಾದೀತು. ಸ್ಥಾನಮಾನಗಳಿಗೆ ಹಾನಿ, ಬುದ್ಧಿಯ ಅಸ್ಥಿರತೆ, ಕಲಹ ಪರಸ್ಥಳ ಸಂಚಾರಾದಿ ಫಲಗಳೂ ಉಂಟಾಗುವುದು. ಗುರು-ಶನಿ-ರಾಹು-ಕೇತುಗಳ ಪ್ರೀತ್ಯರ್ಥ ಯಥಾಶಕ್ತಿ ದೇವತಾರಾಧನೆಯಿಂದ ಶುಭ. ಸಂತಾನಸಂಬಂಧ ದುಃಖ, ಅಸಹನೆ, ದುರಾಸೆಗೆ ಬಲಿಯಾಗುವಿರಿ, ರೋಗಪೀಡೆ, ಸ್ಥಾನಮಾನಾದಿ ಹಾನಿ, ಧನಹಾನಿ, ಅಶುಭಗಳ ಅನುಭವ, ಇತರರೊಂದಿಗೆ ಮನಸ್ತಾಪಗಳು ಉಂಟಾಗುವುದು. ಮುಂದೆ ಜುಲಾಯಿ 16 ರವರೆಗೆ ಸಕಲ ಗೃಹಸುಖಾದಿಗಳು, ಕೆಲವೊಮ್ಮೆ ಕಾರ್ಯವಿಘ್ನ, ಶ್ರಮ, ಆದರೂ ವಿವಿಧಮೂಲಗಳಿಂದ ಧನಪ್ರಾಪ್ತಿಯಿದೆ. ಮುಂದೆ ಸಪ್ಟೆಂಬರ 18 ರವರೆಗೂ ಇಚ್ಛಿತ ಕಾರ್ಯಗಳು ನಡೆಯುವುದಲ್ಲದೆ ಇತರರಿಂದಲೂ ಅನುಕೂಲಗಳು ಉಂಟಾಗುವುದು. ಭೂಸೆಂಬಂಧವಾದ ವ್ಯವಹಾರಗಳು ಆಗೆ ಸುಲಭವಾಗಿ ನಡೆಯಬಹುದು. ಉತ್ತಮ ತಮ ಸ್ಥಾನಮಾನಾದಿಗಳು ದೊರಕುವುದು. ಉತ್ಸಾಹ ಹಾಗೂ ಸಂತೋಷವು ಅಧಿಕಗೊಳ್ಳುವುದು. ಒಕ್ಟೋಬರ 17 ರವರೆಗೆ ದೇಹಾಯಾಸ, ದುಃಖ, ಅಹಂಕಾರದಿಂದ ನಾನಾ ಅನರ್ಥಗಳು ಎದುರಾಗುವವು. ಮುಂದೆ ನವಂಬರ 16 ರವರೆಗೆ ದೇಹಕೃತಿ, ಪಿತ್ತೋಷ್ಣಪ್ರಕೋಪ, ರಕ್ತದೋಷ ಇತ್ಯಾದಿಗಳೊಂದಿಗೆ ಸ್ಥಾನಪ್ರಾಪ್ತಿ, ಗೃಹಲಾಭ, ಧನಲಾಭ, ಶತ್ರುನಾಶ ಇತ್ಯಾದಿ ಪ್ರಾಪ್ತವಾಗುವವು. ಮುಂದೆ ಗೃಹಸುಖಹಾನಿ, ಮಕ್ಕಳ ಕುರಿತು ಚಿಂತೆ, ದೈಹಿಕ ಅನಾರೋಗ್ಯ, ಧನಹಾನಿ, ಕಲಹ, ಮಿಥ್ಯಾಪವಾದ ಇತ್ಯಾದಿಗಳಿರುತ್ತವೆ. ರೋಗನಿವೃತ್ತಿ, ಶತ್ರುನಾಶ, ಶೋಕಪರಿಹಾರ, ಮಕ್ಕಳಿಂದ ಶುಭಫಲ, ಧನಸುವರ್ಣಾದಿಲಾಭ, ಆತ್ಮಸ್ಥೆರ್ಯ ವೃದ್ಧಿಸುವುದು. ಈ ಮಧ್ಯೆ ಶರೀರಕ್ಕೆ ಗಾಯಗಳು ಉಂಟಾಗಬಹುದು. ದೈಹಿಕ ಆಘಾತ, ಮನೋದುಃಖ, ಸ್ವಜನವಿರಹ, ರಕ್ತವ್ಯಾಧಿ, ಉಷ್ಣಪ್ರಕೋಪ, ಕೆಲಸಕಾರ್ಯಗಳಲ್ಲಿ ನಿಧಾನಗತಿಯೂ ಕೆಲವೊಂದು ಅಪಜಯಗಳೂ ಉಂಟಾಗಬಹುದಾದರೂ ದೀರ್ಘಕಾಲಕ್ಕೆ ಈ ತೊಂದರೆಗಳು ಇರಲಾರದು. ಮುಂದೆ ವರ್ಷಾಂತ್ಯದವರೆಗೆ ಗೃಹಸುಖಹಾನಿ, ಕೃಷಿಭೂಮ್ಯಾದಿ ನಷ್ಟ, ಗುರುಹಿರಿಯರ ವಿಯೋಗ, ಅಪಘಾತಭಯ ಉಂಟಾದೀತು. ಸಹೋದರರಿಂದ ಅನುಕೂಲವಿದೆ.