Astrology Yearly Horoscope Details

Select Your Language

Notifications

webdunia
webdunia
webdunia
webdunia

ಜಾತಕ

ಮೀನ
ಮೀನರಾಶಿ:- ಗುರುವು ಈ ವರ್ಷ ಪಂಚಮದಲ್ಲಿ ಸಂಚರಿಸುತ್ತಿರುವುದರಿಂದ ದೈವಬಲವಿದೆ. ಗೃಹದಲ್ಲಿ ಶುಭಕಾರ್ಯಗಳು ನಡೆಯುವುದು. ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯಿದೆ.ನೂತನ ವೃತ್ತಿ ಕೈಗೊಳ್ಳಬಹುದು. ಹೊಸ ಮನೆ ಅಥವಾ ಹೊಸ ಪರಿಸರಕ್ಕೆ ಹೋಗಬೇಕಾಗಬಹುದು. ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಮಕ್ಕಳ ಕಾರಣ ಸಂತೋಷದಾಯಕ ವಾರ್ತೆ ಬರುವುದು. ಕೆಲವು ಸಮಯದಿಂದ ನಡೆಯದೆ ಬಾಕಿಯಾಗಿರುವ ಕಾರ್ಯವು ನಡೆಯಲು ಅನುಕೂಲ. ವಿದ್ಯಾಭ್ಯಾಸ ಹಾಗೂ ವಿದ್ಯೆ-ಬುದ್ದಿಮತ್ತೆಗೆ ಸಂಬಂಧಿಸಿದ ವ್ಯವಹಾರ/ಚಟುವಟಿಕೆಗಳಲ್ಲಿ ತೊಡಗಿದವರು ಉತ್ತಮ ಸಾಧನೆ ತೋರುವಿರಿ. ಆದರೂ ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವಿನ ಸ್ಥಾನಪಲ್ಲಟದಿಂದ ದೈವವು ವಿಮುಖವಾಗುವುದು. ಸೀಸುಖಗೃಹಸುಖಾದಿ ಹಾನಿ, ಮಾನಸಿಕ ಅಶಾಂತಿ, ಶತ್ರುಪೀಡೆ, ರೋಗಭಯ, ಕಾಡಬಹುದು. ವರ್ಷಪೂರ್ತಿ ಶನಿಯೂ ಜನ್ಮರಾಶಿಯಲ್ಲಿದ್ದು ರಾಹುಕೇತುಗಳೂ ಅಶುಭರು. ಮೋಡಿ ಮಾತುಗಳಿಂದ ಮೋಸಹೋಗುವಿರಿ. ವಿಷಾಹಾರ, ವಿಷ ಜಂತುಗಳ ಬಗ್ಗೆ, ಅಗ್ನಿ ಲೋಹ, ವಾಹನಾದಿಗಳಲ್ಲಿ, ಹಾಗೂ ರಾತ್ರಿ ಸಂಚಾರದಲ್ಲಿ ಎಚ್ಚರಿಕೆ ವಹಿಸಬೇಕು. ತನ್ನವರಿಂದ ದೂರವಿರಬೇಕಾದ ಸಂಭವಗಳೂ, ದೂರದೇಶ ಸಂಚಾರಾದಿಗಳೂ ಉಂಟಾಗುವುದು. ಆರ್ಥಿಕ ಸಂಕಷ್ಟ ಎದುರಾಗುವುದು. ಮಾನಸಿಕ ಒತ್ತಡಕ್ಕೊಳಗಾಗುವಿರಿ. ಶಿಸ್ತು, ಸಂಯಮದಿಂದ ಇದ್ದಲ್ಲಿ ನಷ್ಟಕಷ್ಟಗಳು ಕಡಿಮೆಯಾಗಿ ಅನುಭವವಾಗುವುದು. ಶನಿಶಾಂತೆ, ಸುಬ್ರಹ್ಮಣ್ಯಸೇವೆ, ಗಣಪತಿಸೇವೆ, ವಿಷ್ಣುಸೇವೆ, ಶಿವಸೇವೆ ಯಥಾಶಕ್ತಿ ನಡೆಸುವುದರಿಂದ ಶುಭ. ಲೋಹ-ಬೆಂಕಿಯಿಂದ ಅಪಾಯ, ತಿನಿಸುಗಳಿಂದ ಹಾನಿ, ಶಿರೋವೇದನೆ, ದೃಷ್ಟಿಯ ತೊಂದರೆ, ವೃತ್ತಿಯಲ್ಲಿ-ವಾಸಸ್ಥಳದಲ್ಲಿ ಬದಲಾವಣೆ, ಆರ್ಥಿಕ ಏರುಪೇರು, ಸಂಚಾರದಲ್ಲಿ ಕಷ್ಟ, ಆರ್ಥಿಕ ಅಡಚಣೆ, ಕೌಟುಂಬಿಕ ಕಲಹ ಇತ್ಯಾದಿ ಎದುರಾಗುವವು. ಮುಂದೆ ಜೂನ್ 15 ರವರೆಗೆ ಗೃಹಸೌಕರ್ಯಗಳನ್ನು ಹೊಂದುವಿರಿ. ಆರೋಗ್ಯ ಸುಧಾರಿಸುವುದು. ಔದ್ಯೋಗಿಕವಾಗಿಯೂ ಆರ್ಥಿಕವಾಗಿಯೂ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ಮುಂದೆ ಅಗೋಸ್ತು 17 ರವರೆಗೆ ಸ್ವಜನ : ವಿರೋಧ, ಸಾಂಸಾರಿಕ ತಾಪತ್ರಯಗಳು, ಬಹುವಿಧದ ಶತ್ರುಗಳಿಂದ ಪೀಡೆ ಇತ್ಯಾದಿಗಳಿದ್ದು ಯಾವ ಭಾಗದಲ್ಲೂ ಸುಖವಿರದು. ಆದರೂ ಇನ್ನೊಂಡೆಯಿಂದ ಭೂಸಂಪತ್ತಿನ ಅಭಿವೃದ್ಧಿ, - ವ್ಯವಹಾರಗಳು ಉತ್ತಮಗೊಳ್ಳುವುದು. ಇತರರಿಂದ ಸಹಕಾರವನ್ನು ಪಡೆಯುವಿರೆ. ಆರೋಗ್ಯವು ವೃದ್ಧಿಸುವುದು. ಮುಂದೆ ಸಪ್ಟೆಂಬರ 16 ರವರೆಗೆ ಗೃಹಸೌಕರ್ಯಪ್ರಾಪ್ತಿ, ರೋಗನಿವೃತ್ತಿ, ಶತ್ರುನಾಶ, ಆತ್ಮಸ್ಥೆರ್ಯವೃದ್ಧಿ ಇತ್ಯಾದಿ ಉಂಟಾಗುವದು. ದೇಹಕ್ಷತೆಯಿಂದ ನಿಃಶಕ್ತಿ ತಲೆದೋರುವದು. ಮುಂದೆ ದಶಂಬರ 15 ರವರೆಗೆ ಒಂದೆಡೆ ಕಳೆದೋರುವದು ಒಂದೆಡೆ ಪಿತ್ತೋಷ್ಣ ಮೂತ್ರಾಶಯ ಸಮಸ್ಯೆಗಳು ಆತ್ಮಸ್ಥೆರ್ಯಕ್ಕೆ ಹಾನಿ ಹಾಗೂ ಆತ್ಮಸ್ಥೈರ್ಯ ಹೆಚ್ಚಾಗುವುದು, ಆರ್ಥಿಕ ಏರುಪೇರು ಇತ್ಯಾದಿಗಳಿದ್ದು,ಕಾರ್ಯಜಯ, ಅಧಿಕಾರ ಸ್ಥಾನಮಾನಾದ್ಯುತ್ಕರ್ಷೆ, ಪ್ರಭುಜನಾನುಗ್ರಹ, ವಿವಿಧ ಮೂಲಗಳಿಂದ ಧನಪ್ರಾಪ್ತಿ, ಉತ್ತಮ ಆರೋಗ್ಯ ಇತ್ಯಾದಿ ಅನುಭವಕ್ಕೆ ಬರುವದು. ಈ ಮಧ್ಯೆ ನವಂಬರ 12 ರಿಂದ - ನಾಲ್ಕು ತಿಂಗಳು ದೇಹಾರೋಗ್ಯದಲ್ಲಿ ಸುಧಾರಣೆ, ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಮನಸ್ಸಿನಲ್ಲಿ ನಡೆಸಲು ಉದ್ದೇಶಿಸಿದ ಕಾರ್ಯವು ನಡೆಯುವುದು. ಮಾತಿನಲ್ಲಿ ವಿವಾದಗಳು ಉಂಟಾಗದಂತೆ ಜಾಗ್ರತೆ ವಹಿಸಿ ವಹಿಸಿ. ಶತ್ರುಭಯಕಲಹಾದಿಗಳಿಂದ ಮುಕ್ತಿ, ಬಂಗಾರ, ಹವಳ, ತಾಮ್ರ ಇತ್ಯಾದಿ ಅಥವಾ ಅವುಗಳ ವ್ಯವಹಾರದಿಂದ ಲಾಭ, ಇತ್ಯಾದಿ ಅನುಭವಕ್ಕೆ ಬರುವುದು.