ಕುಂಭ
ಕುಂಭರಾಶಿ:- ದ್ವಿತೀಯಸ್ಥಾನದ ಶನಿ, ಜನ್ಮ-ವ್ಯಯಸ್ಥಾನದ ರಾಹು, ಸಪ್ತಮದ ಕೇತು, ಶತ್ರುಸ್ಥಾನದ ಗುರು-ದೈವಕೃಪೆಯ ಅಭಾವ ತೋರುವುದು. ಮಾನಸಿಕ ಖಿನ್ನತೆಯಿಂದ ಬಳಲುವಿರಿ. ಸಾಮಾಜೆಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಇಷ್ಟಪಡುವಿರಿ. ಆರೋಗ್ಯದ ವಿಚಾರವಾಗಿ ಜಾಗ್ರತೆ ವಹಿಸಬೇಕು. ಕೆಲವು ವಿಚಾರಗಳಲ್ಲಿ ಅನ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸ್ತ್ರೀಸುಖಗೃಹಸುಖಾದಿ ಹಾನಿ, ಮಾನಸಿಕ ಅಶಾಂತಿ, ಶತ್ರುಪೀಡೆ, ರೋಗಭಯ ಕಾಣಿಸೀತು.ಶಾರೀರಿಕ ತೊಂದರೆ ಹಾಗೂ ಜಾಡ್ಯತೆ ಕಾಣಿಸೀತು. ಅಲ್ಲದೆ ಶಾರೀರಿಕ ಶ್ರಮವನ್ನೂ ಅನುಭವಿಸುವಿರಿ, ಸ್ಫೂರ್ತಿ ಕಳಕೊಂಡು ಕೆಲಸದಲ್ಲಿ ಅನಾಸಕ್ತಿ ತೋರುವಿರಿ. ಮನೆಯವರೊಂದಿಗೆ ಹೊಂದಾಣಿಕೆ ಕಡಿಮೆಯಾದಂತೆ ತೋರುವುದು. ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸುವುದರಿಂದ ವಿಶಾಲಭಾವನೆಯು ನಿಮ್ಮಲ್ಲಿ ಉಂಟಾಗುವುದು ಹಾಗೂ ಹಲವು ಸಮಸ್ಯೆಗಳಿಗೆ ಪರಿಹಾರವೂ ದೊರಕುವುದು. ಮೋಸ-ವಂಚನೆ, ಕಳ್ಳತನ, ಕಲಹ ಇತ್ಯಾದಿ ಅನುಭವವಾಗುವುದು. ಶಾರೀರಿಕ ಸುಖ ಕಡಿಮೆಯಾಗುವುದು. ವ್ಯವಹಾರಾದಿಗಳಲ್ಲಿ ಅನುಕೂಲ ಕಡಿಮೆಯಾಗುವುದು. ಧನಾದಾಯವಾಗಲು ವಿಶೇಷ ಪ್ರಯತ್ನ ಕಷ್ಟ ಪಡಬೇಕಾಗುವುದು. ಧನಾದಾಯವಾದರೂ ಹೆಚ್ಚು ಖರ್ಚುಗಳು ಉಂಟಾಗಬಹುದು. ವರ್ಷದ ಉತ್ತರಾರ್ಧದಲ್ಲಿ ಮೂರುತಿಂಗಳು ಗುರುವು ಅನುಕೂಲವಾಗಿ ವಿವಾಹ ಶುಭಶೋಭನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮಕಾಲವಾಗಿರುತ್ತದೆ. ಭೂಮಿ, ವಾಹನಾದಿ ಸುಖಗಳು ಉಂಟಾಗುವುದು. ಶನಿಶಾಂತಿ, ಗುರು-ಶನಿ-ರಾಹು ಪ್ರೀತ್ಯರ್ಥ ಯಥಾಶಕ್ತಿ ದೇವತಾರಾಧನೆ ನಡೆಸುವುದರಿಂದ ಶುಭ.
ವಿಷಯಸುಖಾನುಭವಗಳಿಗೆ ಕೊರತೆಯಿಲ್ಲವಾದರೂ ಆರ್ಥಿಕ ಅಡಚಣೆ, ಅಧಿಕಾರಿ ಜನರ ಕಿರುಕುಳ ಮುಂತಾದವು ತಪ್ಪದು. ಮುಂದೆ ಮೇ 15 ರವರೆಗೆ ಇಷ್ಟವಸ್ತು ಪ್ರಾಪ್ತಿ, ಸ್ವಜನರಿಂದ ಸುಖ, ಪ್ರಭುಜನರ ಪ್ರೀತಿ ಇತ್ಯಾದಿಗಳಿದ್ದು ವ್ಯವಹಾರಗಳು ಉತ್ತಮಗೊಳ್ಳುವುದು. ಇತರರಿಂದ ಸಹಕಾರವನ್ನು ಪಡೆಯುವಿರಿ. ಆರೋಗ್ಯವು ವೃದ್ಧಿಸುವುದು. ಮಕ್ಕಳಿಂದ ಶುಭಫಲ, ಕಂಬಳಿ, ಧಾತುದ್ರವ್ಯಗಳು ಇತ್ಯಾದಿಗಳಿಂದ ಲಾಭವಿದೆ. ಮುಂದೆ ಜುಲಾಯಿ 16 ರವರೆಗೆ ಅನಿರೀಕ್ಷಿತ ಕಷ್ಟ ತೊಂದರೆಗಳು ಬಂದೊದಗಿ ಮನಸ್ಸಿಗೆ ನೆಮ್ಮದಿಯಿರದು. ಗೃಹಸುಖವು ಸಾಕಷ್ಟಿರುವುದಾದರೂ ಆರೋಗ್ಯವು ಚೆನ್ನಾಗಿರದು. ನಂತರ ಅಗೋಸ್ತು 17 ರವರೆಗೆ ಆರ್ಥಿಕ ಪ್ರಗತಿ, ಸ್ಥಾನಾಂತರ ಲಾಭ, ಕಾರ್ಯಸಿದ್ಧಿ, ಸತ್ಸಹವಾಸ ಇತ್ಯಾದಿ ಇಷ್ಟಫಲಗಳು ಅಧಿಕ. ಮುಂದೆ ನವಂಬರ 16 ರವರೆಗೆ ವ್ಯವಹಾರದಲ್ಲಿ ಕಷ್ಟನಷ್ಟಗಳು, ಸಾಂಸಾರಿಕ ಅಡಚಣೆ ಮೊದಲಾದ ಅನಿಷ್ಟಫಲಗಳು ಒಂದಿಲ್ಲೊಂದು ರೀತಿಯಿಂದ ಬಂದೊದಗುತ್ತವೆ. ಆದರೂ ಇನ್ನೊಂದೆಡೆ ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಮನಸ್ಸಿನಲ್ಲಿ ನಡೆಸಲು ಉದ್ದೇಶಿಸಿದ ಕಾರ್ಯವು ನಡೆಯುವುದು. ಮಾತಿನಲ್ಲಿ ನೀವು ವಿವಾದಗಳು ಉಂಟಾದೀತೆಂದು ಜಾಗ್ರತೆ ವಹಿಸುವಿರಿ. ಹಿಂದಿನ ಪ್ರತಿಕೂಲ ಪರಿಸ್ಥಿತಿಯು ಸುಧಾರಿಸತೊಡಗಿ ಆತಂಕ ಕಡಿಮೆಯಾದೀತು. ಜನರ ಗೆಳೆತನ, ಶತ್ರುಗಳ ಪರಾಭವ, ಕಾರ್ಯಸಿದ್ದಿ, ಅಧಿಕಾರಿ ಜನರ ಸಹಕಾರ ಮುಂತಾದವು ಇರುತ್ತವೆ. ಈ ಅವಧಿಯಲ್ಲಿ ಇಚ್ಛಿತ ಕಾರ್ಯಗಳೆಲ್ಲವೂ ಪ್ರಾಯಃ ಈಡೇರುವವು. ನಂತರ ವರ್ಷಾಪೈರಿಯ ದಿನಗಳಲ್ಲಿ ಹಿಂದಿನ ಅನಿಷ್ಟ ಫಲಗಳೆಲ್ಲವೂ ಪುನಃ ಕಾಣಿಸತೊಡಗುವವು. ಬೇರೊಂದೆಡೆಯಿಂದ ಸತ್ಕಾರ್ಯಪ್ರವೃತ್ತಿ, ಸತ್ಸಹವಾಸ, ಗುರುಜನಾನುಗ್ರಹ, ವಿವಿಧ ಮೂಲಗಳಿಂದ ಧನಾಗಮ, ಹೀಗೆ ಇಷ್ಟಾನಿಷ್ಟ ಫಲಗಳು ಒಟ್ಟಿಗೆ ಪ್ರಾಪ್ತವಾಗುವವು.