Select Your Language

Notifications

webdunia
webdunia
webdunia
webdunia

ಜಾತಕ

ಮಕರ
ಮಕರರಾಶಿ:- ಗುರುವು ಸಪ್ತಮದಲ್ಲಿದ್ದು ಉತ್ತಮ ದೈವಬಲವಿದೆ. ಶನಿಯೂ ವರ್ಷವಿಡೀ ತೃತೀಯಸ್ಥಾನದಲ್ಲಿ ಸಂಚರಿಸುತ್ತಾ ಕೆಲವೊಂದು ಅನುಕೂಲಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಿವಾಹ ಶುಭಶೋಭನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮ ಕಾಲವಾಗಿರುತ್ತದೆ. ಭೂಮಿ, ವಾಹನಾದಿ ಸುಖಗಳು ಉಂಟಾಗುವುದು. ಪತ್ನಿಗೂ ಅನುಕೂಲ ಕಾಲವಾಗಿರುತ್ತದೆ. ದಾಂಪತ್ಯದಲ್ಲಿ ಸುಖಸಂತೋಷಗಳು, ಸಂತಾನಲಾಭ, ಧನಲಾಭ, ಶುಭಯಾತ್ರೆ, ಉತ್ತಮ ಬುದ್ಧಿಶಕ್ತಿ ಪ್ರಾಪ್ತವಾಗುವುದು. ವಿಶೇಷ ಆರೋಗ್ಯ ಹಾಗೂ ಸೌಲಭ್ಯವನ್ನು ಹೊಂದುವಿರಿ. ಉತ್ತಮ ನಿರ್ಧಾರಗಳು ನಿಮ್ಮಿಂದ ಉಂಟಾಗುವುದು. ಸಹೋದರ ಸಮಾನರಿಂದ ಸುಖ ಹಾಗೂ ಅನುಕೂಲಗಳು ಕಂಡುಬರುವುದು. ಒಡನಾಡಿಗಳಿಗೆ ಕೆಲವೊಂದು ತೊಂದರೆಗಳೂ ಉಂಟಾಗುವುದು. ಸಾಂಪತ್ತಿಕ ಅಭಿವೃದ್ಧಿಗೆ ಇದು ಅನುಕೂಲ ಕಾಲ, ಕೌಟುಂಬಿಕ ಅಭಿವೃದ್ಧಿಯಾಗುವುದು. ಆದರೂ ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ಅಷ್ಟಮದಲ್ಲಿ ಸಂಚರಿಸುತ್ತಾ ರಾಹುಕೇತುಗಳೂ ವರ್ಷಪೂರ್ತಿ ಅನಿಷ್ಟಸ್ಥಾನಸ್ಥಿತರಾಗಿ ಕೆಲವೋಂದು ಕಷ್ಟನಷ್ಟಗಳು ಎದುರಾಗುವವು. ಆರೋಗ್ಯದಲ್ಲಿ ಗುರುತರದ ತೊಂದೆರೆಗಳು ತೋರುವುದು. ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವ್ವಹಾರಗಳಲ್ಲಿ ಸೋಲುಂಟಾಗಬಹುದು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ತೋರಬಹುದು. ಆರ್ಥಿಕವಾಗಿ ಖರ್ಚು ಹಾಗೂ ನಷ್ಟಗಳು ಉಂಟಾಗಬಹುದು. ಅನೇಕ ರೀತಿಯ ಚಿಂತೆಗಳು ಕಾಡಬಹುದು. ಗಣಪತಿ-ಸುಬ್ರಹ್ಮಣ್ಯ-ವಿಷ್ಣುಕ್ಷೇತ್ರಗಳಲ್ಲಿ ಯಥಾಶಕ್ತಿ ಸೇವೆ ಸಲ್ಲಿಸುವುದರಿಂದ ಶುಭ. ಔದ್ಯೋಗಿಕವಾಗಿಯೂ ಆರ್ಥಿಕವಾಗಿಯೂ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ವ್ಯವಹಾರಗಳು ಉತ್ತಮಗೊಳ್ಳುವುದು. ಆರೋಗ್ಯವು ವೃದ್ಧಿಸುವುದು. ಕಂಬಳಿ, ಧಾತುದ್ರವ್ಯಗಳು ಇತ್ಯಾದಿಗೆಳಿಂದ ಲಾಭ, ಧನಸುವರ್ಣಾದಿಲಾಭ, ಮಕ್ಕಳಿಂದ ಶುಭಫಲ, ಆದರೂ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸೀತು. ಗೃಹಸುಖವಿರದು. ಮುಂದೆ ಜುನ್ 15 ರವರೆಗೆ ಗೃಹಸೌಕರ್ಯಕ್ಕೆ ಖರ್ಚು, ಕೌಟುಂಬಿಕ ಸಾಮರಸ್ಯದ ಕೊರತೆ, ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚೆಣೆಗಳು -ಸಮಸ್ಯೆಗಳು, ಶತ್ರುಪೀಡೆ, ಅನಾರೋಗ್ಯ, ಕಲಹ ಎದುರಾದೀತು. ಮುಂದೆ ಜುಲಾಯಿ 16 ರವರೆಗೆ ದೇಹಾರೋಗ್ಯದಲ್ಲಿ ಸುಧಾರಣೆ, ಗೃಹಸೌಕರ್ಯಗಳು ಹೆಚ್ಚುವುದು. ಆತ್ಮಸ್ಥೆರ್ಯ ವೃದ್ಧಿಸುವುದು. ಮುಂದೆ ಒಕ್ಟೋಬರ 17 ರವರೆಗೆ ಧನವ್ಯಯ, ಕಳ್ಳರ ಹಾಗೂ ಶತ್ರುಗಳ ಹಾವಳಿ, ಕೃಷಿಪಶ್ಚಾದಿ ಹಾನಿ ಇತ್ಯಾದಿ ಅನಿಷ್ಟಫಲಗಳೇ ಒಂದರಮೇಲೊಂದು ಬಂದೊದಗುವವು. ಆದರೂ ಈ ಮಧ್ಯೆ ಪ್ರಾರಂಭದಲ್ಲಿ ದೀರ್ಘಕಾಲದ ಸಮಸ್ಯೆಗೆ ಪರಿಹಾರ, ಕಾರ್ಯಜಯ, ಬಂಧುಸಹಕಾರ ಇತ್ಯಾದಿ ಅನುಭವಕ್ಕೆ ಬರುವವು, ಮುಂದೆ ದಶಂಬರ 16 ರವರೆಗೂ ಕೆಲವೊಂದು ಶುಭಫಲಗಳಿದ್ದು ರಾಜಪ್ರೀತಿ, ತೊಡಗಿದ ಕಾರ್ಯಗಳಲ್ಲಿ ಜಯಲಾಭಾದಿಗಳಿದ್ದು ಅನಂತರ ಒಂದೆಡೆಯಿಂದ ಧನವ್ಯಯ, ತಿರುಗಾಟ, ಕಾರ್ಯವಿಘ್ನ, ಮನಃಕ್ಷೇಶ ಕಾಣಿಸೀತು. ಹೊಟ್ಟೆ ಹಾಗೂ ಕಣ್ಣಿಗೆ ಸಂಬಂಧಿಸಿ ಹೆಚ್ಚು ಎಚ್ಚರಿಕೆ ವಹಿಸಿ. ಪೈತ್ತಿಕ ತೊಂದರೆಗಳಿವೆ. ಪತ್ನಿಗೂ ಈ ಸಮಯ ಅನುಕೂಲಕರವಲ್ಲ. ಮನಸ್ಸಿಗೆ ವ ನೆಮ್ಮದಿ ಕಡಿಮೆಯಾಗುವುದು. ಅಸಹನೆ ಹೆಚ್ಚಿತು. ಶಾರೀರಿಕ ಅಪಾಯಗಳು ಉಂಟಾಗಬಹುದಾದುದರಿಂದ ಜಾಗ್ರತೆ ವಹಿಸಿರಿ. ಬೇರೊಂದೆಡೆಯಿಂದ ವಿವಿಧ ಮೂಲಗಳಿಂದ ಧನಾಗಮ, ಮಿತ್ರಜನರ ಸಹಾಯ, ಆರೋಗ್ಯವೃದ್ಧಿ, ಹೊಸಕಾರ್ಯಪ್ರವೃತ್ತಿ ಇತ್ಯಾದಿ ಇರುತ್ತವೆ. ಮುಂದೆ ವರ್ಷಾಖೈರಿವರೆಗೂ ಕೈಗೊಂಡ ಕಾರ್ಯಗಳಲ್ಲಿ ಜಯಲಾಭಾದಿಗಳು, ಜನಪ್ರಿಯತೆ, ಜನನಾಯಕತ್ವ, ಭೂಧನಾದಿ ಲಾಭ ಇತ್ಯಾದಿಗಳಿರುತ್ತವೆ.