Select Your Language

Notifications

webdunia
webdunia
webdunia
webdunia

ಅಂದು ಅಪ್ಪನಾಣೆ ಆಗಲ್ಲ ಎಂದ ಸಿದ್ದರಾಮಯ್ಯ ಬಾಯಲ್ಲೇ ಇಂದು ಕುಮಾರಸ್ವಾಮಿ ಸಿಎಂ ಎಂಬ ಮಾತು!

ಅಂದು ಅಪ್ಪನಾಣೆ ಆಗಲ್ಲ ಎಂದ ಸಿದ್ದರಾಮಯ್ಯ ಬಾಯಲ್ಲೇ ಇಂದು ಕುಮಾರಸ್ವಾಮಿ ಸಿಎಂ ಎಂಬ ಮಾತು!
ಬೆಂಗಳೂರು , ಬುಧವಾರ, 16 ಮೇ 2018 (07:40 IST)
ಬೆಂಗಳೂರು:  ಜೆಡಿಎಸ್ ಜತೆ ಸೇರಿಕೊಂಡು ಸರ್ಕಾರ ರಚಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಇಂದು ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ.

ನಿನ್ನೆ ತಡರಾತ್ರಿ ಜೆಡಿಎಸ್ ನಾಯಕರಾದ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಜತೆಗೆ ಮಾತುಕತೆ ನಡೆಸಿದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದಾರೆ.

‘ಕುಮಾರಸ್ವಾಮಿಯೇ ಸಿಎಂ ಆಗಲಿದ್ದಾರೆ. ಉಳಿದ ಖಾತೆಗಳ ಬಗ್ಗೆ ನಂತರ ಚರ್ಚೆ ಮಾಡುತ್ತೇವೆ. ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಜೆಡಿಎಸ್ ಜತೆ ಸೇರಿಕೊಂಡು ಸರ್ಕಾರ ರಚಿಸುವ ನಿರ್ಣಯವನ್ನು ಇಲ್ಲಿ ಅಂಗೀಕಾರ ಮಾಡಲಿದ್ದೇವೆ. ಸರ್ಕಾರ ರಚಿಸಲು ಸಾಕಷ್ಟು ಸಂಖ್ಯೆಯ ಶಾಸಕರು ನಮ್ಮ ಬಳಿ ಇದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲು ಮತ ನೀಡಿದ ಕರ್ನಾಟಕದ ಜನತೆಗೆ ಧನ್ಯವಾದಗಳು – ಅಮಿತ್ ಶಾ