Select Your Language

Notifications

webdunia
webdunia
webdunia
webdunia

ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!

ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!
ಬೆಂಗಳೂರು , ಶುಕ್ರವಾರ, 7 ಅಕ್ಟೋಬರ್ 2022 (12:17 IST)
ಬೆಂಗಳೂರು : ತುರ್ತು ಸಂದರ್ಭದಲ್ಲಿ ಜೀವ ಉಳಿಸಬೇಕಾದ 108 ಅಂಬುಲೆನ್ಸ್ ಗಳು ಬಹುತೇಕ ಡಕೋಟಾ ಎಕ್ಸ್ಪ್ರೆಸ್, ಜೊತೆಗೆ ಅಂಬುಲೆನ್ಸ್ ಒಳಗಿರುವ ಸಲಕರಣೆಗಳು ಕೂಡ ಹಳೆಯದಂತೆ.
 
ಹೀಗಂತ ಸ್ವತಃ ಆರೋಗ್ಯ ಸಚಿವ ಡಾ. ಸುಧಾಕರ್  ಅವರೇ ಹೇಳಿದ್ದಾರೆ. ಹೌದು. 2008ರಲ್ಲಿ ಜಿವಿಕೆ ಸಂಸ್ಥೆ 108 ಅಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದು ಖುದ್ದು ಸರ್ಕಾರಕ್ಕೆ ಇವ್ರ ಸೇವೆ ತೃಪ್ತಿ ಇಲ್ವಂತೆ.

ಜೊತೆಗೆ ನಿರೀಕ್ಷಿತ ಮಟ್ಟದ ಸೇವೆಯನ್ನು ಕೊಡುತ್ತಿಲ್ಲ ಅಂತಾ ಆರೋಗ್ಯ ಸಚಿವರೇ ಖುದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಟೆಂಡರ್ ಮುಗಿದ ಬಳಿಕವೂ ಜಿವಿಕೆ ಕೋರ್ಟ್ ಮೊರೆ ಹೋಗಿದ್ರಿಂದ ಇವರ ಸೇವೆಯನ್ನು ಮುಂದುವರಿಸಬೇಕಾಯ್ತು ಎಂದದಿದ್ದಾರೆ.

ಜಿವಿಕೆಯ ವಿರುದ್ಧ ವೇತನ ನೀಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಸಿಡಿದೆದ್ದಿದ್ರಿಂದ 108 ಸೇವೆ ವ್ಯತ್ಯಯವಾಗುವ ಆತಂಕ ಇತ್ತು. ಆದರೆ ಇಂದು ಇದರ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಭೆ ಕರೆದಿದೆ. ಹೀಗಾಗಿ ಸಮಸ್ಯೆ ಬಗೆಹರಿಯುವ ನಿರೀಕ್ಷೆಯೂ ಇದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ !