GSLV-F10 ರಾಕೆಟ್ನಲ್ಲಿ ತಾಂತ್ರಿಕ ದೋಷ; ಮಿಷನ್ ಪೂರ್ಣಗೊಳ್ಳಲು ವಿಫಲ

Webdunia
ಗುರುವಾರ, 12 ಆಗಸ್ಟ್ 2021 (09:41 IST)
ಬೆಂಗಳೂರು, ಆ. 12: ಅನೇಕ ಸಾಹಸಗಾಥೆಗಳ ಇತಿಹಾಸ ಹೊಂದಿರುವ ಇಸ್ರೋದ ಜಿಎಸ್ಎಲ್ವಿ ರಾಕೆಟ್ ಇಂದು ತನ್ನ ಮಿಷನ್ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸ್ಪೇಸ್ಪೋರ್ಟ್ನಿಂದ ಬೆಳಗ್ಗೆ ಜಿಎಸ್ಎಲ್ವಿ ಎಫ್10 (GSLV-F10) ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡರು ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಸೆಟಿಲೈಟನ್ನು ನಿಗದಿತ ಜಾಗಕ್ಕೆ ಬಿಡಲು ವಿಫಲಗೊಂಡಿದೆ. ತಾಂತ್ರಿಕ ದೋಷ ಇದಕ್ಕೆ ಕಾರಣ ಎನ್ನಲಾಗಿದೆ.

ಎಂ EOS-3 ಬ ಭೂ ವೀಕ್ಷಣಾ ಸೆಟಿಲೈಟನ್ನ (Earth Observation Satellite) ರಾಕೆಟ್ ಹೊತ್ತೊಯ್ದಿತ್ತು.
ಬೆಳಗ್ಗೆ ನಿಗದಿಯಂತೆ 5:43ಕ್ಕೆ ಜಿಯೋ ಸಿಂಕ್ರೋನಸ್ ಸೆಟಿಲೈಟ್ ಲಾಂಚ್ ವೆಹಿಕಲ್ ತಂತ್ರಜ್ಞಾನದ 51.70 ಮೀಟರ್ ಎತ್ತರದ ಎಫ್10 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ಅದಾದ ಬಳಿಕ ಮೊದಲ ಹಾಗೂ ಎರಡನೇ ಹಂತವೂ ಯಶಸ್ವಿಯಾಗಿ ನಡೆಯಿತು. ಆದರೆ, ತಾಂತ್ರಿಕ ದೋಷದಿಂದಾಗಿ ಕ್ರಯೋಜೆನಿಕ್ ಎಂಜಿನ್ನ ಮೇಲಿನ ಮಟ್ಟದಲ್ಲಿ (Cryogenic Upper Stage) ನಿಶ್ಚಿತ ರೀತಿಯಲ್ಲಿ ಕಿಡಿ (ignition) ಹೊತ್ತಲಿಲ್ಲ. ಹೀಗಾಗಿ, ಸೆಟಿಲೈಟನ್ನು ನಿಗದಿತ ಕಕ್ಷೆಗೆ ಸೇರಿಸಲು ರಾಕೆಟ್ ವಿಫಲಗೊಂಡಿತೆನ್ನಲಾಗಿದೆ.
ರಾಕೆಟ್ನೊಳಗೆ ಇದ್ದ ಭೂ ವೀಕ್ಷಣಾ ಸೆಟಿಲೈಟ್ ಬಹಳ ಮುಖ್ಯವಾದ ಮಿಷನ್ ಹೊಂದಿದೆ. ಇದು ನೈಸರ್ಗಿಕ ವಿಕೋಪ ದುರಂತಗಳು ಸಂಭವಿಸಿದಾಗ ಬಹಳ ತ್ವರಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಲು ನೆರವಾಗಬಲ್ಲುದು. ರಿಯಲ್ ಟೈಮ್ನಲ್ಲಿ ದುರಂತದ ಪ್ರದೇಶಗಳ ಚಿತ್ರಗಳನ್ನ ಇದು ಆಗಾಗ್ಗೆ ಒದಗಿಸುತ್ತದೆ. ಪ್ರಕೃತಿ ವಿಕೋಪ ಘಟನೆಗಳ ಮುನ್ಸೂಚನೆ, ಚಂಡಮಾರುತದ ಪರಿಶೀಲನೆ, ಮೇಘ ಸ್ಫೋಟ, ಸಿಡಿಲು ಇತ್ಯಾದಿ ದುರಂತಗಳನ್ನ ಸಮರ್ಕಪವಾಗಿ ಪರಿಶೀಲನೆ ನಡೆಸಲು ಇದು ನೆರವಾಗುತ್ತದೆ. ಈ ಅರ್ತ್ ಅಬ್ಸರ್ವೇಶನ್ ಸೆಟಿಲೈಟ್ 10 ವರ್ಷದ ಜೀವಿತಾವಧಿ ಹೊಂದಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಧಾಂದಲೆ: ಪ.ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ

ನ್ಯಾಷನಲ್ ಹೆರಾಲ್ಡ್‌ ಪ್ರಕರಣ, ಸೋನಿಯಾ, ರಾಹುಲ್ ಗಾಂಧಿಗೆ ಬಿಗ್‌ ರಿಲೀಫ್‌

ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು: ಸಚಿವ ಮಧು ಬಂಗಾರಪ್ಪ

ವಿಮಾನ ಮಹಿಳಾ ಸಿಬ್ಬಂದಿ ಜತೆ ಅನುಚಿತ ವರ್ತನೆ, ವೃದ್ಧ ಪ್ರಯಾಣಿಕನ ವಿರುದ್ಧ ದೂರು

ಯಮುನಾ ಎಕ್ಸ್‌ಪ್ರೆಸ್‌ವೇ ಅಪಘಾತ, ಮೃತ 13 ಮಂದಿ ಕುಟುಂಬಕ್ಕೆ ಯೋಗಿ ₹2 ಲಕ್ಷ ಪರಿಹಾರ ಘೋಷಣೆ

ಮುಂದಿನ ಸುದ್ದಿ
Show comments