Select Your Language

Notifications

webdunia
webdunia
webdunia
webdunia

ಸುಧಾಮೂರ್ತಿ ಬಡವರ ನಾಡಿ ಮಿಡಿತ ಬಲ್ಲವರು!

ಇನ್ಫೋಸಿಸ್
ಸುಧಾಮೂರ್ತಿಯವರು ಜನರಿಗಾಗಿ ಏನೆಲ್ಲ ಮಾಡಿದ್ದಾರೆ, ಮಾಡುತ್ತಿದ್ದಾರೆ ಅನ್ನೋದು ಬಿಗ್ ಬಿ ಗೆ ಚೆನ್ನಾಗಿ ಗೊತ್ತಿದೆ.
ಅದಕ್ಕೆ ಮತ್ತೊಂದು ಸಾಕ್ಷಿಯೆಂದರೆ ಜಯದೇವ ಹೃದ್ರೋಗ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಸುಸಜ್ಜಿತ 350 ಬೆಡ್ ಸಾಮರ್ಥ್ಯದ ಈ ಹೆಚ್ಚುವರಿ ಹೃದ್ರೋಗ ಘಟಕ.
ಹಿಂದೊಮ್ಮೆ ಸುಧಾಮೂರ್ತಿ ಅವರು ತಮ್ಮ ಪತಿ ಹಾಗೂ ಇನ್ಫೋಸಿಸ್ ಸಂಸ್ಥೆ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಬೇರೆ ಬೇರೆ ಊರುಗಳಿಂದ ಬಂದಿದ್ದ ಅನೇಕ ಬಡ ಜನರಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವುದನ್ನು ಗಮನಿಸಿದ್ದರು. ಆಗಲೇ ಅವರು ಒಂದು ಹೆಚ್ಚುವರಿ ಘಟಕ ಸ್ಥಾಪಿಸಲು ನಿರ್ಧರಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಅದರ ಫಲವೇ ಈ ಆಸ್ಪತ್ರೆ.
ಎಮರ್ಜೆನ್ಸಿ ಆಬ್ಸರ್ವೇಷನ್ ಯುನಿಟ್, ಓಪಿಡಿ, ಲ್ಯಾಬ್ ಸೇರಿದಂತೆ ಅನೇಕ ಸೌಲಭ್ಯಗಳು ಕೇಂದ್ರದಲ್ಲಿವೆ. ಜಯದೇವ ಹೃದ್ರೋಗ ಸಂಸ್ಥೆಯ ಚೀಫ್ ಡಾ ಸಿ ಎನ್ ಮಂಜುನಾಥ ಅವರು ಸೋಮವಾರ ಈ ಘಟಕವನ್ನು ಮಾಧ್ಯಮದವರಿಗೆ ತೋರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆಯಿಂದ ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ