Select Your Language

Notifications

webdunia
webdunia
webdunia
webdunia

ಪ್ರಮಾಣ ವಚನ ಸಮಾರಂಭದ ವಿಶೇಷತೆಗಳೇನು?

ಪ್ರಮಾಣ ವಚನ ಸಮಾರಂಭದ ವಿಶೇಷತೆಗಳೇನು?
ಬೆಂಗಳೂರು , ಬುಧವಾರ, 23 ಮೇ 2018 (09:45 IST)
ಬೆಂಗಳೂರು: ಇಂದು ಸಂಜೆ 4.30 ಕ್ಕೆ ವಿಧಾನಸೌಧದ ಮುಂಭಾಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಸಮಾರಂಭಕ್ಕೆ ವಿಧಾನಸೌಧದ ಮುಂಭಾಗ ಸಂಪೂರ್ಣ ಸಜ್ಜಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿ ಅಧಿಕಾರಿಗಳು ಸಮಾರಂಭಕ್ಕೆ ಸಕಲ ರೀತಿಯ ತಯಾರಿ ನಡೆಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ವೇದಿಕೆ ಪಕ್ಕ ಸುಮಾರು 3000 ಆಸನಗಳನ್ನು ಗಣ್ಯರಿಗೆಂದೇ ಮೀಸಲಿಡಲಾಗಿದೆ. ಕಾರ್ಯಕ್ರಮಕ್ಕೆ ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇದಕ್ಕಾಗಿ ಇಂದು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಎಲ್ ಸಿಡಿ ಪರದೆಗಳನ್ನೂ ಹಾಕಲಾಗಿದೆ. ವಾಹನ ನಿಲುಗಡೆಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಯುಬಿ ಸಿಟಿ, ಕಂಠೀರವ ಮೈದಾನ, ಸರ್ಕಾರಿ ಕಲಾ ಕಾಲೇಜಿ ಆವರಣ, ಸೆಂಟ್ರಲ್ ಕಾಲೇಜ್ ಆವರಣ ಮುಂತಾದೆಡೆ ಸಾರ್ವಜನಿಕರು ವಾಹನ ನಿಲುಗಡೆ ಮಾಡಬಹುದಾಗಿದೆ. ಗಣ್ಯರು, ಶಾಸಕರ ವಾಹನಗಳನ್ನು ವಿಕಾಸ ಸೌಧದ ವಾಹನ ನಿಲುಗಡೆ ಮಾಡಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಗಲಿರುವ ಕುಮಾರಸ್ವಾಮಿಯಿಂದ ಹೊಸ ದಾಖಲೆ