Select Your Language

Notifications

webdunia
webdunia
webdunia
webdunia

ನಾಟಕ ನಡೀತಾ ಇದೆ, ನೋಡೋಣ ಮುಂದೇನಾಗುತ್ತೆ ಅಂತ: ಕೆಎಸ್ ಈಶ್ವರಪ್ಪ ಲೇವಡಿ

ನಾಟಕ ನಡೀತಾ ಇದೆ, ನೋಡೋಣ ಮುಂದೇನಾಗುತ್ತೆ ಅಂತ: ಕೆಎಸ್ ಈಶ್ವರಪ್ಪ ಲೇವಡಿ
ಬೆಂಗಳೂರು , ಬುಧವಾರ, 23 ಮೇ 2018 (09:13 IST)
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ನಾಟಕ ನಡೀತಾ ಇದೆ. ನಾವು ನೋಡ್ತಾ ಇದ್ದೀವಿ. ಮುಂದೇನಾಗುತ್ತದೆ ನೋಡೋಣ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಜತೆ ಸೇರಿಕೊಂಡು ಮೈತ್ರಿ ಸರ್ಕಾರ ಮಾಡಲು ಹೊರಟಿರುವ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರದಲ್ಲಿ ಉಲ್ಟಾ ಹೇಳಿಕೆ ನೀಡಿರುವುದಕ್ಕೆ ಈಶ್ವರಪ್ಪ ಈ ರೀತಿ ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಇದೀಗ ಸಿಎಂ ಆಗಲು ಹೊರಟಿರುವಂತೆ ಕುಮಾರಸ್ವಾಮಿ ನಮಗೆ ಬಹುಮತ ಸಿಕ್ಕಿದ್ದರೆ ಸಂಪೂರ್ಣ ಸಾಲಮನ್ನಾ ಮಾಡುತ್ತಿದ್ದೆ. ಈಗ ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಒಬ್ಬನೇ ಎಲ್ಲಾ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಈಶ್ವರಪ್ಪ ಕುಮಾರ ಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಲೂಟಿಕೋರರೆಲ್ಲಾ ಇಂದು ಬೆಂಗಳೂರಿಗೆ ಬರ್ತಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್