Webdunia - Bharat's app for daily news and videos

Install App

ತನ್ನ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನಿಸಿದವರಿಗೆ ಖಡಕ್ ಉತ್ತರ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

Webdunia
ಶನಿವಾರ, 14 ಏಪ್ರಿಲ್ 2018 (12:48 IST)
ನವದಿಲ್ಲಿ : ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ರಾಷ್ಟ್ರೀಯತೆ ಬಗ್ಗೆ ಮಾತನಾಡಿದ ಟ್ವೀಟರ್ ಖಾತೆದಾರರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.


ಕತುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು,’ ಜಗತ್ತಿನ ಮುಂದೆ ನಾವು ಇಂತಹ ಒಂದು ದೇಶವೆಂದು ಅನಿಸಿಕೊಳ್ಳಬೇಕೆಂದು ಬಯಸುತ್ತಿದ್ದೇವೆಯೇ?, ನಮ್ಮ ಜಾತಿ, ವರ್ಣ, ಧರ್ಮ ಹಾಗೂ ಲಿಂಗವನ್ನು ಮರೆತು ಈ ಎಂಟರ ಬಾಲೆಗಾಗಿ ನಾವಿಂದು ಎದ್ದು ನಿಲ್ಲದೇ ಇದ್ದರೆ ನಾವು ಈ ಜಗತ್ತಿನಲ್ಲಿ ಯಾವುದೇ ವಿಚಾರಕ್ಕೂ ಎದ್ದು ನಿಲ್ಲುವವರಾಗುವುದಿಲ್ಲ. ಕನಿಷ್ಠ ಮಾನವತೆಗೂ ಕೂಡ. ನನಗೆ ಅಸಹನೆ ಮೂಡುತ್ತಿದೆ'' ಎಂದು ಸಾನಿಯಾ ಟ್ವೀಟ್ ಮಾಡಿದ್ದರು.


ಆಗ ಕಿಚು ಕನ್ನನ್ ನಮೋ ಎಂಬ ಟ್ವಿಟರ್ ಖಾತೆದಾರರು, ‘ನಿಮ್ಮ ಎಲ್ಲ ಗೌರವಗಳೊಂದಿಗೆ, ಮೇಡಂ, ನೀವು ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಒಬ್ಬ ಪಾಕಿಸ್ತಾನಿಯನ್ನು ವಿವಾಹವಾಗಿದ್ದೀರಿ. ನೀವು ಈಗ ಭಾರತೀಯರಲ್ಲ. ನಿಮಗೆ ಟ್ವೀಟ್ ಮಾಡಬೇಕೆಂದಿದ್ದರೆ, ಪಾಕ್ ಉಗ್ರರ ಸಂಘಟನೆಗಳಿಂದ ಹತರಾದ ಮುಗ್ಧರ ಬಗ್ಗೆ ಟ್ವೀಟ್ ಮಾಡಿ'' ಎಂದು ಟ್ವೀಟ್ ಮಾಡಿ ಸಾನಿಯಾ ಅವರಿಗೆ ವ್ಯಂಗ್ಯ ಮಾಡಿದ್ದಾರೆ.


ಇದಕ್ಕೆ ಸಾನಿಯಾ ಮಿರ್ಜಾ ಅವರು ಟ್ವೀಟ್ ಮಾಡಿ,’ ಮೊದಲನೆಯದಾಗಿ ಮದುವೆ ಎಂಬುದು ವೈಯುಕ್ತಿಕ ವಿಚಾರ, ಎರಡನೆಯದಾಗಿ ನಿಮ್ಮಂತಹ ಕೀಳು ಜೀವಗಳು ನಾನು ಯಾವ ದೇಶಕ್ಕೆ ಸೇರಿದವಳು ಎಂದು ಹೇಳುವ ಹಾಗಿಲ್ಲ. ನಾನು ಭಾರತಕ್ಕಾಗಿ ಆಡುತ್ತೇನೆ, ನಾನೊಬ್ಬಳು ಭಾರತೀಯಳು ಹಾಗೂ ಮುಂದೆಯೂ ಭಾರತೀಯಳಾಗಿಯೇ ಇರುತ್ತೇನೆ. ನೀವು ಧರ್ಮ ಹಾಗೂ ದೇಶದ ಪರಿಧಿಯನ್ನು ದಾಟಿ ನೋಡಿದರೆ ನೀವು ಕೂಡ ಮಾನವತೆಗಾಗಿ ಎದ್ದು ನಿಲ್ಲುತ್ತೀರಿ’ ಎಂದು ಖಡಕ್ ಆಗಿ ಉತ್ತರಿಸಿ ಅವರ ಚಳಿ ಬಿಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನಾ ಯೋಧನ ಮೇಲೆ ಹಿಗ್ಗಾಮುಗ್ಗಾ ಥಳಿತ, ಟೋಲ್ ಸಂಗ್ರಹ ಸಂಸ್ಥೆಗೆ ಬಿತ್ತು ಭಾರೀ ದಂಡ

ಅವಾಚ್ಯ ಶಬ್ದಗಳಿಂದ ನಿಂದನೆ: ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್‌

ಒಳಮೀಸಲಾತಿಯಲ್ಲಿ ಎಲ್ಲಾ ಜಾತಿಯವರಿಗೂ ನ್ಯಾಯ ಕೊಡಿ: ವಿಜಯೇಂದ್ರ ಆಗ್ರಹ

ಇಂಡಿಯಾ ಒಕ್ಕೂಟದ ಉಪರಾಷ್ಟ್ರಪತಿ ಸುದರ್ಶನ ರೆಡ್ಡಿ ಯಾರು

ಕೆಲಸಕ್ಕಿದ್ದ ಮನೆಯವರನ್ನೇ ತನ್ನ ಮಗಳು ಎಂದು ಏಮಾರಿಸಿದ್ರಾ ಸುಜಾತ ಭಟ್

ಮುಂದಿನ ಸುದ್ದಿ
Show comments