Select Your Language

Notifications

webdunia
webdunia
webdunia
webdunia

ಶಬರಿಮಲೆ ದೇಗುಲ ಓಪನ್!

ಶಬರಿಮಲೆ ದೇಗುಲ ಓಪನ್!
ಕೇರಳ , ಗುರುವಾರ, 4 ನವೆಂಬರ್ 2021 (10:32 IST)
ಕೊಚ್ಚಿ (.04) : ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವು ನ. 15 ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ ಎಂದು ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್  ತಿಳಿಸಿದೆ.
ಈ ವೇಳೆ ಭಕ್ತಾದಿಗಳು ತಮ್ಮೊಂದಿಗೆ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು, ಜತೆಗೆ 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್ ಆರ್ಟಿ-ಪಿಸಿಆರ್  ವರದಿಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಟಿಡಿಬಿ ತಿಳಿಸಿದೆ.
ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ದೇವಾಲಯವು ಬುಧವಾರ ಚಿತಿರಾ ಅಟ್ಟವಿಶೇಷ ಪೂಜೆಗಾಗಿ ಭಕ್ತಾದಿಗಳಿಗೋಸ್ಕರ ತೆರೆಯಲ್ಪಟ್ಟಿತ್ತು. ಪೂಜೆಯ ನಂತರ ರಾತ್ರಿ 9 ಘಂಟೆಗೆ ಮುಚ್ಚಲಾಯಿತು. ಭಕ್ತಾದಿಗಳನ್ನು ವರ್ಚುವಲ್ ಕ್ಯೂ ಬುಕಿಂಗ್  ವ್ಯವಸ್ಥೆಯ ಮೂಲಕ ಅನುಮತಿಸಲಾಗಬಹುದು ಎಂದು ಬೋರ್ಡ್  ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ 1 ರೂ. ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ!