Webdunia - Bharat's app for daily news and videos

Install App

ರಷ್ಯಾ ‘ಕದನ ವಿರಾಮ’ ವಿಫಲ

Webdunia
ಭಾನುವಾರ, 6 ಮಾರ್ಚ್ 2022 (13:59 IST)
ಯುದ್ಧಪೀಡಿತ ಉಕ್ರೇನ್ನ ಎರಡು ನಗರಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಉದ್ದೇಶಿದಿಂದ ರಷ್ಯಾ 2 ನಗರಗಳಲ್ಲಿ ಶನಿವಾರ ಸಾರಿದ್ದ ಕೆಲ ಹೊತ್ತಿನ ಕದನ ವಿರಾಮ ವಿಫಲವಾಗಿದೆ.
 
ಕದನವಿರಾಮ ಘೋಷಿಸಿದ ಬಳಿಕವೂ ರಷ್ಯಾ ಭಾರೀ ಶೆಲ್ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಆರೋಪಿಸಿದ್ದು, ಈ ಕದನ ವಿರಾಮ ವಿಫಲವಾದಂತಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:30ರಿಂದ ಮರಿಯುಪೋಲ್ ಮತ್ತು ವೊಲ್ನೋವಖಾದಿಂದ ನಾಗರಿಕರ ತೆರವಿಗೆ ಮಾನವೀಯ ನೆಲೆಯಲ್ಲಿ ಮಿಲಿಟರಿ ಕಾರಾರಯಚರಣೆಯನ್ನು ನಿಲ್ಲಿಸಲಾಗುತ್ತದೆ.

ಈ ವೇಳೆ ಆಹಾರ ಮತ್ತು ಔಷಧಿಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ರಷ್ಯಾ ಶನಿವಾರ ಬೆಳಗ್ಗೆ ಘೋಷಿಸಿತ್ತು. ಅಲ್ಲದೆ, ‘ಮರಿಯುಪೋಲ್ನಿಂದ 2 ಲಕ್ಷ ಮಂದಿ ಮತ್ತು ವೊಲ್ನೋವಖಾದಿಂದ 20,000 ಜನರು ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ’ ಎಂದು ರಷ್ಯಾದ ‘ಸ್ಪುಟ್ನಿಕ್’ ಮಾಧ್ಯಮ ವರದಿ ಮಾಡಿತ್ತು.

ಆದರೆ ರಷ್ಯಾ ಎಷ್ಟುಅವಧಿಯವರೆಗೆ ಕದನ ವಿರಾಮ ಇರಲಿದೆ ಎಂಬ ಸ್ಪಷ್ಟಮಾಹಿತಿ ನೀಡಿರಲಿಲ್ಲ. ಇದು ಗೊಂದಲಕ್ಕೆ ಕಾರಣವಾಯಿತು. ಇದರ ನಡುವೆಯೇ, ‘ರಷ್ಯಾ ಮರಿಯುಪೋಲ್ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಶೆಲ್ ದಾಳಿ ನಡೆಸಿದೆ. ಹೀಗಾಗಿ ಯಾವುದೇ ನಾಗರಿಕರನ್ನು ಸ್ಥಳಾಂತರ ಕಾರ್ಯ ಕೈಗೂಡಲಿಲ್ಲ’ ಎಂದು ಉಕ್ರೇನ್ ಹೇಳಿಕೆ ನೀಡಿದೆ. ಇದರೊಂದಿಗೆ ಕದನವಿರಾಮದ ಆಶಯ ಈಡೇರದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುಂಬಮೇಳದಲ್ಲೂ ಕಾಲ್ತುಳಿತ ಆಗಿಲ್ವಾ ಎಂದ ಸಿದ್ದರಾಮಯ್ಯ: ಆಗ ನೀವು ಟೀಕಿಸಿಲ್ವಾ ಎಂದ ಪಬ್ಲಿಕ್

Chinnaswamy stampede: ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ರೂ ಹಠ ಹಿಡಿದವರು ಇವರೇ

Chinnaswamy stampede: ಅಣ್ಣಾವ್ರು ತೀರಿಕೊಂಡಾಗಲೂ ಹೀಗೇ ಆಗಿತ್ತು

Karnataka Weather: ಮಳೆಯಿಂದ ಸಾಕು ಸಾಕಾಗಿದ್ದರೆ ಈ ಅಪ್ ಡೇಟ್ ಗಮನಿಸಿ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

ಮುಂದಿನ ಸುದ್ದಿ
Show comments