Webdunia - Bharat's app for daily news and videos

Install App

ರಷ್ಯಾ ‘ಕದನ ವಿರಾಮ’ ವಿಫಲ

Webdunia
ಭಾನುವಾರ, 6 ಮಾರ್ಚ್ 2022 (13:59 IST)
ಯುದ್ಧಪೀಡಿತ ಉಕ್ರೇನ್ನ ಎರಡು ನಗರಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಉದ್ದೇಶಿದಿಂದ ರಷ್ಯಾ 2 ನಗರಗಳಲ್ಲಿ ಶನಿವಾರ ಸಾರಿದ್ದ ಕೆಲ ಹೊತ್ತಿನ ಕದನ ವಿರಾಮ ವಿಫಲವಾಗಿದೆ.
 
ಕದನವಿರಾಮ ಘೋಷಿಸಿದ ಬಳಿಕವೂ ರಷ್ಯಾ ಭಾರೀ ಶೆಲ್ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಆರೋಪಿಸಿದ್ದು, ಈ ಕದನ ವಿರಾಮ ವಿಫಲವಾದಂತಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:30ರಿಂದ ಮರಿಯುಪೋಲ್ ಮತ್ತು ವೊಲ್ನೋವಖಾದಿಂದ ನಾಗರಿಕರ ತೆರವಿಗೆ ಮಾನವೀಯ ನೆಲೆಯಲ್ಲಿ ಮಿಲಿಟರಿ ಕಾರಾರಯಚರಣೆಯನ್ನು ನಿಲ್ಲಿಸಲಾಗುತ್ತದೆ.

ಈ ವೇಳೆ ಆಹಾರ ಮತ್ತು ಔಷಧಿಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ರಷ್ಯಾ ಶನಿವಾರ ಬೆಳಗ್ಗೆ ಘೋಷಿಸಿತ್ತು. ಅಲ್ಲದೆ, ‘ಮರಿಯುಪೋಲ್ನಿಂದ 2 ಲಕ್ಷ ಮಂದಿ ಮತ್ತು ವೊಲ್ನೋವಖಾದಿಂದ 20,000 ಜನರು ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ’ ಎಂದು ರಷ್ಯಾದ ‘ಸ್ಪುಟ್ನಿಕ್’ ಮಾಧ್ಯಮ ವರದಿ ಮಾಡಿತ್ತು.

ಆದರೆ ರಷ್ಯಾ ಎಷ್ಟುಅವಧಿಯವರೆಗೆ ಕದನ ವಿರಾಮ ಇರಲಿದೆ ಎಂಬ ಸ್ಪಷ್ಟಮಾಹಿತಿ ನೀಡಿರಲಿಲ್ಲ. ಇದು ಗೊಂದಲಕ್ಕೆ ಕಾರಣವಾಯಿತು. ಇದರ ನಡುವೆಯೇ, ‘ರಷ್ಯಾ ಮರಿಯುಪೋಲ್ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಶೆಲ್ ದಾಳಿ ನಡೆಸಿದೆ. ಹೀಗಾಗಿ ಯಾವುದೇ ನಾಗರಿಕರನ್ನು ಸ್ಥಳಾಂತರ ಕಾರ್ಯ ಕೈಗೂಡಲಿಲ್ಲ’ ಎಂದು ಉಕ್ರೇನ್ ಹೇಳಿಕೆ ನೀಡಿದೆ. ಇದರೊಂದಿಗೆ ಕದನವಿರಾಮದ ಆಶಯ ಈಡೇರದಂತಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments