Select Your Language

Notifications

webdunia
webdunia
webdunia
webdunia

ಕೇರಳಕ್ಕೆ 500 ಕೋಟಿ ರೂ. ತುರ್ತು ಪರಿಹಾರ ಘೋಷಣೆ ಮಾಡಿದ ಪ್ರಧಾನಿ ಮೋದಿ

ಕೇರಳಕ್ಕೆ 500 ಕೋಟಿ ರೂ. ತುರ್ತು ಪರಿಹಾರ ಘೋಷಣೆ ಮಾಡಿದ ಪ್ರಧಾನಿ ಮೋದಿ
ಕೇರಳ , ಶನಿವಾರ, 18 ಆಗಸ್ಟ್ 2018 (13:34 IST)
ತಿರುವನಂತಪುರ: ಮಹಾಮಳೆಗೆ ಕೇರಳದ ಜನಜೀವನ ತತ್ತರಿಸಿ ಹೋಗಿದೆ.  ಈ ಹಿನ್ನೆಲೆ ನಿನ್ನೆ ರಾತ್ರಿ ಕೇರಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸಿದರು. ತುರ್ತು ಪರಿಹಾರವಾಗಿ 500ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಪ್ರಧಾನಿ ಆದೇಶಿಸಿದ್ದಾರೆ.


ಬೆಳಗ್ಗೆಯಿಂದ ಅಧಿಕಾರಿಗಳೊಂದಿಗೆ ಕೇರಳ ಪರಿಸ್ಥಿತಿ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಅಲ್ಲಿನ ಸ್ಥಿತಿಗತಿಯ ಕುರಿತು ಮಾಹಿತಿ ಕಲೆಹಾಕಿದತರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಪಿ.ಸದಾಶಿವಂ ಹಾಗೂ ಸಿಎಂ ಪಿಣರಾಯಿ ವಿಜಯನ್‌ ಜತೆಗೂ ಪ್ರಧಾನಿ ಮೋದಿ ಜತೆ ಸಮಾಲೋಚನೆ ನಡೆಸಿದರು.


ಹಣಕಾಸಿನ ಸಹಾಯದ ಜತೆಗೆ ಆಹಾರ ಧಾನ್ಯ, ಔಷಧ ಮುಂತಾದ ಎಲ್ಲ ರೀತಿಯ ಸಹಾಯಕ್ಕೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ದಂಪತಿಯ ಈ ನಡವಳಿಕೆಯೇ ಸ್ವಿಸ್ ಪೌರತ್ವ ನಿರಾಕರಣೆಗೆ ಕಾರಣವಾಯಿತಂತೆ