Webdunia - Bharat's app for daily news and videos

Install App

ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಗೆ ಕೆಂಡದಂಥಾ ಕೋಪ ಬಂದಿದ್ದೇಕೆ?!

Webdunia
ಗುರುವಾರ, 17 ಮೇ 2018 (08:37 IST)
ಬೆಂಗಳೂರು: ಹಾಗೂ ಹೀಗೂ ಕಷ್ಟಪಟ್ಟು ಕೆಪಿಜೆಪಿ ಪಕ್ಷದ ಶಾಸಕ ಶಂಕರ್ ಬೆಂಬಲ ಗಳಿಸಿದ್ದನ್ನು ಅಷ್ಟೇ ವೇಗವಾಗಿ ಕೈ ತಪ್ಪಲು ಕಾರಣರಾದ ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಸಿಟ್ಟಿಗೆದ್ದಿದ್ದಾರೆ.

ನಿನ್ನೆ ಬೆಳಿಗ್ಗೆಯವರೆಗೂ ಶಂಕರ್ ಬಿಜೆಪಿ ಪರ ಇದ್ದರು. ಆದರೆ ಸಂಜೆ ಕಾಂಗ್ರೆಸ್ ಕಡೆಗೆ ವಾಲಿದ್ದರು. ಸದ್ಯಕ್ಕೆ ಬಿಜೆಪಿಗೆ ಒಬ್ಬೊಬ್ಬ ಶಾಸಕರ ಬೆಂಬಲವೂ ಮುಖ್ಯ. ಹಾಗಿರುವಾಗ ಅನಾಯಾಸವಾಗಿ ಸಿಕ್ಕ ಶಾಸಕನನ್ನು ಉಳಿಸಿಕೊಳ್ಳದ ಈಶ್ವರಪ್ಪ ಮೇಲೆ ಜಾವೇಡ್ಕರ್ ಸಿಟ್ಟಿಗೆದ್ದಿದ್ದಾರೆ.

‘ಒಬ್ಬ ಹಿರಿಯ ನಾಯಕನಾಗಿ ನಿಮಗೆ ಶಾಸಕನನ್ನು ಉಳಿಸಿಕೊಳ್ಳಲಾಗಲಿಲ್ಲವೇ? ನಿಮ್ಮ ಮಗ ಕಾಂತೇಶ್ ನನ್ನು ಕಳುಹಿಸಿ ಏಕೆ ಒಪ್ಪಿಸಿದಿರಿ? ನಿಮ್ಮ ಜತೆಗೇ ಇದ್ದ ಶಾಸಕ ಕಾಂಗ್ರೆಸ್ ಜತೆ ಸಂಪರ್ಕ ಬೆಳೆಸಿದ್ದು ಹೇಗೆ? ಇದನ್ನೆಲ್ಲಾ ಅಮಿತ್ ಶಾ ಗಮನಕ್ಕೆ ತರುತ್ತೇನೆ. ನೀವೇ ಉತ್ತರ ಕೊಡಿ’ ಎಂದು ಈಶ್ವರಪ್ಪಗೆ ಜಾವೇಡ್ಕರ್ ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸೂಯೆ ತಡೆಯಲಾರದೆ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದಿದೆ: ಡಿಕೆ ಶಿವಕುಮಾರ್ ಕಿಡಿ

ಬಿಪಿಎಲ್ ಕುಟುಂಬಗಳಿಗೆ ಆಯುಷ್ಮಾನ್ ಯೋಜನೆಯಡಿ ಐವಿಎಫ್ ಚಿಕಿತ್ಸೆ

ಸಕಲೇಶಪುರ–ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ

ಆಗ ಕಾಲು ಹಿಡಿದಿದ್ದವನು ಈಗ ನನಗೆ ಪಾಠ ಮಾಡುತ್ತಾನಾ: ಬಾಲಕೃಷ್ಣ ವಿರುದ್ಧ ಎಚ್‌ ಡಿ ಕುಮಾರಸ್ವಾಮಿ ಕಿಡಿ

ಪ್ರಪಾತಕ್ಕೆ ಬೀಳುವ ಮುನ್ನಾ ದಿನ ಸಂಬಂಧಗಳ ಬಗ್ಗೆ ಮಾತನಾಡಿದ್ದ ಕುಣಾಲ್ ತಾಯಿ

ಮುಂದಿನ ಸುದ್ದಿ
Show comments