Webdunia - Bharat's app for daily news and videos

Install App

ಮಳೆ ನಿಂತು ಹೋದ ಮೇಲೆ... ಕೊಡಗಿನ ಜನರಿಗೆ ಈಗ ಭವಿಷ್ಯದ ಪ್ರಶ್ನೆ

Webdunia
ಬುಧವಾರ, 22 ಆಗಸ್ಟ್ 2018 (09:02 IST)
ಕೊಡಗು: ಮಳೆ ಬಂತು.. ನೆರೆಯೂ ಬಂತು.. ಮನೆ ಮಠ, ಆಸ್ತಿ, ಜಮೀನು ಎಲ್ಲವೂ ಕೊಚ್ಚಿ ಹೋಯಿತು. ಇದೀಗ ಕೊಡಗಿನ ಜನರಿಗೆ ಜೀವನ ಮುಂದೆ ಹೇಗೆ ಎಂಬ ಪ್ರಶ್ನೆ ಮೂಡಿದೆ.

ಪ್ರವಾಹ ಬಂದು ನಿರಾಶ್ರಿತರ ಶಿಬಿರದಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಸದ್ಯಕ್ಕೆ ಹೊಟ್ಟೆ ತುಂಬಿಸಿಕೊಳ್ಳಲು ದಾನಿಗಳು ಸಹಾಯ ಮಾಡುತ್ತಿದ್ದಾರೆ. ಆದರೆ ಅವರ ದೊಡ್ಡ ಅಗತ್ಯ ಭವಿಷ್ಯದಲ್ಲಿ ಜೀವನ ಶೂನ್ಯದಿಂದ ಕಟ್ಟಿಕೊಳ್ಳಲು ಸಹಾಯ ಬೇಕಾಗಿದೆ.

ಮನೆ ಪತ್ರ, ಪಡಿತರ ಚೀಟಿ ಸೇರಿದಂತೆ ಇತರ ಸರ್ಕಾರಿ ದಾಖಲೆ ಪತ್ರಗಳು, ಮನೆ, ಜಮೀನು ಎಲ್ಲವೂ ಮರಳಿ ಪಡೆಯಬೇಕಾಗಿದೆ. ಇದಕ್ಕಾಗಿಯೇ ಸರ್ಕಾರ ಇದೀಗ ಸಂತ್ರಸ್ತರಿಗಾಗಿ ಶೀಘ್ರವೇ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರ ಜತೆಗೇ ನಿರಾಶ್ರಿತರಿಗೆ ಮನೆ ಕಟ್ಟಿಕೊಡಲು ಯೋಜನೆ ರೂಪಿಸಿದೆ.

ಇದಕ್ಕೆಲ್ಲಾ ಕನಿಷ್ಠವೆಂದರೂ ತಿಂಗಳುಗಳೇ ಬೇಕು. ಇದರ ನಡುವೆ ತಮ್ಮ ಬದುಕು ಸವೆಸುವುದು  ಹೇಗೆ ಎಂಬ ಚಿಂತೆ ಕೊಡಗಿನ ಜನತೆಯನ್ನು ಕಾಡುತ್ತಿದೆ. ಎಲ್ಲವನ್ನೂ ಶುರುವಿನಿಂದಲೇ ಕಟ್ಟಿಕೊಳ್ಳಬೇಕಲ್ಲಾ ಎಂಬ ಚಿಂತೆಯಲ್ಲಿ ಕೊಡಗಿನ ಜನ ಕಣ್ಣೀರಿಡುತ್ತಿದ್ದಾರೆ. ರಸ್ತೆ ರಿಪೇರಿ, ಮನೆ ಶುಚಿ ಕಾರ್ಯ ಇಂತಹ ಕೆಲಸಗಳಿಗೆ ಸರ್ಕಾರ ಈಗಾಗಲೇ ತನ್ನ ಕಾರ್ಯ ಶುರು ಮಾಡಿದೆ. ಹಾಗಿದ್ದರೂ ಇದೆಲ್ಲಾ ಸುಲಭದ ಮಾತಲ್ಲ. ಭವಿಷ್ಯದ ಚಿಂತೆಯಲ್ಲಿ ಕೊಡಗಿನ ಜನ ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments