Publish Date: Mon, 21 Feb 2022 (08:10 IST)
Updated Date: Mon, 21 Feb 2022 (09:13 IST)
ಲಖನೌ : ಪಂಜಾಬ್ ವಿಧಾನಸಭೆಯ ಎಲ್ಲ 117 ಕ್ಷೇತ್ರಗಳು ಹಾಗೂ ಉತ್ತರ ಪ್ರದೇಶ ವಿಧಾನಸಭೆಗೆ ಭಾನುವಾರ ನಡೆದ ಮೂರನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಪಂಜಾಬ್ನಲ್ಲಿ ಶೇ.64.27 ಹಾಗೂ ಉತ್ತರ ಪ್ರದೇಶದಲ್ಲಿ ಶೇ.60.08ರಷ್ಟು ಮತದಾನವಾಗಿದೆ.
ಅಮೃತಸರ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಶಿರೋಮಣಿ ಅಕಾಲಿ ದಳ (ಎಸ್ಎಡಿ) ವಿಕ್ರಮ್ ಸಿಂಗ್ ಮಜಿಥಿಯಾ ಅವರು ಭಾನುವಾರ ಮತಗಟ್ಟೆಯಲ್ಲಿ ಭೇಟಿಯಾಗಿದ್ದು, ಕೆಲ ಹೊತ್ತು ಉಭಯ ಕುಶಲೋಪರಿ ನಡೆಸಿದರು.
ಚುನಾವಣೆಗೂ ಮುನ್ನ ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರೂ ಭೇಟಿ ವೇಳೆ ನಗುನಗುತ್ತಾ ಕುಶಲೋಪರಿ ನಡೆಸಿದರು. ನಗರದ ವರ್ಕಾ ಪ್ರದೇಶದಲ್ಲಿ ಮತದಾನ ಮಾಡಲು ತೆರಳಿದ್ದಾಗ ಇಬ್ಬರು ನಾಯಕರು ಭೇಟಿಯಾದರು.