ಚಾಲಕರಿಗೆ ಸಂತಸ, ಜನಸಾಮಾನ್ಯನಿಗೆ ಇನ್ನಷ್ಟು ಹೊರೆ!

Webdunia
ಗುರುವಾರ, 11 ನವೆಂಬರ್ 2021 (10:48 IST)
ಬಹಳ ದಿನಗಳಿಂದ ನಗರದ ಆಟೋ ಚಾಲಕರು ಬಾಡಿಗೆ ದರಗಳನ್ನು ಪರಿಷ್ಕರಿಸುವಂತೆ ಬೆಂಗಳೂರು ನಗರ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಲೇ ಇದ್ದರು.
ಆದರೆ ಅವರ ಮೊರೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಕಳೆದ 8 ವರ್ಷಗಳಿಂದ ಆಟೋ ಬಾಡಿಗೆ ದರ ಮಾತ್ರ ಪರಿಷ್ಕರಣೆಗೊಂಡಿರಲಿಲ್ಲ. ಆದರೆ ಜಿಲ್ಲಾಡಳಿತದಿಂದ ಅವರಿಗೆ ಈಗ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಈಗಿನ ಕನಿಷ್ಠ ದರ ರೂ. 25 ಡಿಸೆಂಬರ್ 1ರಿಂದ ಬದಲಾಗಿ ರೂ. 30 ಆಗಲಿದೆ! ಇದು ಆಟೋ ಚಾಲಕರು ಮತ್ತು ಅವರ ಕುಟುಂಬಗಳಿಗೆ ಸಂತೋಷದ ಸಂಗತಿಯಾದರೂ, ಜನಸಾಮಾನ್ಯರಿಗೆ ಹೆಚ್ಚುವರಿ ಹೊರೆಯಾಗಲಿದೆ. ಅವರ ಗೋಳು ಯಾವ ಆಡಳಿತವೂ ಕೇಳೋದಿಲ್ಲ.
ಸರಿ, ಆಟೋ ಬಾಡಿಗೆ ವಿಚಾರಕ್ಕೆ ಬರುವ. ಕಳೆದ 8 ವರ್ಷಗಳಿಂದ ಆಟೋ ಬಾಡಿಗೆಗಳಲ್ಲಿ ಹೆಚ್ಚಳವಾಗಿರಲಿಲ್ಲ. ಅವರಿಗೆ ಅನ್ಯಾಯವಾಗುತ್ತಿದ್ದಿದ್ದು ಸತ್ಯ. ನಾವು ಗಮನಿಸುವ ಹಾಗೆ ದರಗಳು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರ ಸಂಬಳಗಳು ಪ್ರತಿವರ್ಷ ಪರಿಷ್ಕೃತಗೊಳ್ಳುತ್ತಿರುತ್ತವೆ. ಇನ್ಕ್ರಿಮೆಂಟ್ಗಳು  ಸಿಗುತ್ತವೆ, ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಸಿಗುತ್ತದೆ. ಆದರೆ ಆಟೋ ಚಾಲಕರಿಗೆ ಎಂಥದ್ದೂ ಇಲ್ಲ. ಪೆಟ್ರೋಲಿಯಂ ಉತ್ಪನ್ನಗಳ ದರಗಳು ಮತ್ತು ಹೋಟೆಲ್ ತಿಂಡಿಗಳ ಬೆಲೆಗಳ ಬೆಲೆಯೂ ಹೆಚ್ಚಾಗಿವೆ.ಈಗ ಜಾರಿಯಲ್ಲಿರುವ ರೂ. 25 ಕನಿಷ್ಟ ದರ ಡಿಸೆಂಬರ್ 1 ರಿಂದ ರೂ. 30 ಆಗಲಿದೆ. ಮಿನಿಮಮ್ ಚಾರ್ಜ್ ನಂತರ ಪ್ರತಿ ಕಿಲೋಮೀಟರ್ಗೆ ಈಗಿನ ರೂ 13 ಡಿಸೆಂಬರ್ 1 ರಿಂದ ರೂ 15 ಆಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಜನೌಷಧಿ ಕೇಂದ್ರಗಳಿದ್ದರೆ ನಿಮಗೇನು ಸಮಸ್ಯೆ: ರಾಜ್ಯ ಸರ್ಕಾರಕ್ಕೆ ಕೋರ್ಟ್ ತರಾಟೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸದನದಲ್ಲೇ ನಿದ್ದೆ ಹೋದ ಡಿಕೆ ಶಿವಕುಮಾರ್: ರಾತ್ರಿಯೆಲ್ಲಾ ನಿದ್ರೆಯಿಲ್ವಾ ಎಂದು ಕಾಲೆಳದ ಆರ್ ಅಶೋಕ್

ಹೆಚ್ಚು ವೋಟ್ ಪಡೆದಿದ್ದು ಸರ್ದಾರ್ ವಲ್ಲಭಾಯಿ ಪಟೇಲ್, ಆದ್ರೆ ನೆಹರೂ ಹೇಗೆ ಪ್ರಧಾನಿಯಾದ್ರು

ಮುಂದಿನ ಸುದ್ದಿ
Show comments