Publish Date: Wed, 16 May 2018 (09:09 IST)
Updated Date: Wed, 16 May 2018 (09:10 IST)
ಬೆಂಗಳೂರು: ರಾಜ್ಯದ ಬಿಜೆಪಿ ನಾಯಕರ ಶ್ರಮ ನೋಡಿದರೆ ಈ ಬಾರಿ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತಲೇ ಇರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಮೋದಿ, ಅಮಿತ್ ಶಾ ಮ್ಯಾಜಿಕ್ ಕೆಲಸ ಮಾಡಿತು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಸಂಪೂರ್ಣ ಪ್ರಚಾರ ಜವಾಬ್ಧಾರಿಯನ್ನು ರಾಜ್ಯ ನಾಯಕರ ಕೈಗೆ ವಹಿಸದೇ ಸ್ವತಃ ಅಮಿತ್ ಶಾ ಕೈಗೆ ತೆಗೆದುಕೊಂಡರು. ಚುನಾವಣೆಗೆ ಎರಡು ತಿಂಗಳ ಮೊದಲೇ ರಾಜ್ಯದಲ್ಲಿ ಬೀಡುಬಿಟ್ಟಿದ್ದ ಅಮಿತ್ ಶಾ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮ ವಹಿಸಿದರು.
ಚುನಾವಣೆಗೆ ಕೆಲವೇ ದಿನಗಳ ಮೊದಲು ಪ್ರಧಾನಿ ಮೋದಿ ಮಾಡಿದ ಚುನಾವಣಾ ರ್ಯಾಲಿಗಳು ಬಿಜೆಪಿಗೆ ಸಂಜೀವಿನಿಯಾಗಿ ಪರಿಣಮಿಸಿತು. ಅಮಿತ್ ಶಾ ರಾಜ್ಯದ ನಾಯಕರ ಭಿನ್ನಾಭಿಪ್ರಾಯಗಳು ಹೊರಬರದಂತೆ ನೋಡಿಕೊಂಡರು. ಇದೆಲ್ಲದರಿಂದಾಗಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.