Webdunia - Bharat's app for daily news and videos

Install App

ಗಗನಕ್ಕೇರಿದ ಬೆಲೆಯಿಂದ ಕಂಗಾಲಾದ ಗ್ರಾಹಕರು!

Webdunia
ಸೋಮವಾರ, 29 ನವೆಂಬರ್ 2021 (09:35 IST)
ವಿಜಯನಗರ : ಸತತ ಭಾರಿ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೊಳಗಾಗಿದ್ದು ಮಾರುಕಟ್ಟೆಗೆ ತರಕಾರಿ ಆವಕ ಕುಸಿದಿದೆ.
ರೈತರು ಬೆಳೆ ಹಾನಿಯಾಗಿ ಸಂಕಟದ ಉರುಳಿಗೆ ಸಿಲುಕಿದರೆ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ.
ಮಾರುಕಟ್ಟೆಗಳಿಗೆ ತರಕಾರಿ ಬಾರದಿರುವುದರಿಂದ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಟೊಮೇಟೊ, ಕ್ಯಾಪ್ಸಿಕಂ, ಬೀನ್ಸ್, ನುಗ್ಗೆಕಾಯಿ ಬೆಲೆ ದುಪ್ಪಟ್ಟಾಗಿದೆ. ಹೀಗಾಗಿ ದಿನ ನಿತ್ಯ ಅಡುಗೆಗೆ ತರಕಾರಿ ಖರೀದಿಸುವ ಜನರ ಜೇಬು ಖಾಲಿಯಾಗುತ್ತಿದೆ.
ಒಂದು ವೇಳೆ ಮಾರುಕಟ್ಟೆಗೆ ಬಂದ ತರಕಾರಿಯೂ ಬೇಗ ಕೊಳೆಯುತ್ತಿದೆ. ವೈವಿಧ್ಯಮಯ ತರಕಾರಿ ಸಂರಕ್ಷಿಸಿಕೊಳ್ಳುವಲ್ಲಿ ವ್ಯಾಪಾರಸ್ಥರು ಹೆಣಗಾಡುವಂತಾಗಿದೆ. ಮಳೆಗಾಲದಲ್ಲಿ ತರಕಾರಿ ಬೆಳೆಯುವುದೆ ದುಸ್ತರವಾಗಿದೆ. ಮೋಡ ಮುಸುಕಿದ ವಾತಾವರಣದ ಏರುಪೇರಿನಿಂದ ಬೆಳೆಯೂ ಸರಿಯಾಗಿ ಬಾರದೆ ಬೆಲೆ ಏರಿಕೆಗೆ ಕಾರಣವಾಗಿದೆ. ತರಕಾರಿ ಬೆಲೆ ಕೇಳಿದ ಜನರು ಬೆಚ್ಚಿ ಬೀಳುವ ಜತೆಗೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಯಾವ್ಯಾವು ಎಷ್ಟು?
ನಗರದ ಎಪಿಎಂಸಿಯಲ್ಲಿ 15 ಕೆ.ಜಿ. ಬಾಕ್ಸ್ ಟೊಮೇಟೊ 600ರಿಂದ 1100 ರೂ.ಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 60-80 ರೂ., ಗೆ ಟೊಮೇಟೊ ಸಿಗುತ್ತಿಲ್ಲ. ಬದನೆಕಾಯಿಗೆ 70ರಿಂದ 90 ರೂ., ಈರುಳ್ಳಿಗೆ 50ರಿಂದ 70 ರೂ.,ಇದ್ದು ಗ್ರಾಹಕರಲ್ಲಿ ಕಣ್ಣೀರು ತರಿಸಿದರೆ, ಸೌತೆಕಾಯಿ 50ರಿಂದ 70 ರೂ., ಕ್ಯಾರೇಟ್ 80ರಿಂದ 100 ರೂ., ಗೋರಿಕಾಯಿ 60 ರೂ., ಹೀರೇಕಾಯಿ 80 ರೂ., ಪಡವಲಕಾರಿ 70 ರೂ., ಹಾಗಲಕಾಯಿ 70 ರೂ., ಹಸಿ ಮೆಣಸಿನ ಕಾಯಿ 100 ರೂ., ಬೆಂಡೆಕಾಯಿ 80 ರೂ.,ಗೆ ಏರಿಕೆಯಾಗಿದೆ. ಇನ್ನೂ ಬೀನ್ಸ್ 120ರಿಂದ 150 ರೂ., ಇದ್ದು, ಜನಸಾಮಾನ್ಯರು ಖರೀದಿಸದಂತಾಗಿದೆ. ದೊಣ್ಣೆ ಮೆಣಸಿನಕಾಯಿ 150ರಿಂದ 170 ರೂ., ಇದೆ. ಆಲೂಗಡ್ಡೆ ಮಾತ್ರ 30 ರೂ. ಸಾಮಾನ್ಯವಾಗಿದೆ. ಇನ್ನೂ ಉಳಿದ ಎಲ್ಲ ತರಕಾರಿ ಬೆಲೆ ಗಗನಕ್ಕೇರಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Video, ನಿನ್ನ ಗುರುತೇ ಸಿಗದ ಹಾಗೇ ಮಾಡುತ್ತೇನೆ: ಗ್ಯಾಸ್ ಸ್ಟೇಷನ್ ಸಿಬ್ಬಂದಿಗೆ ಮಹಿಳೆ ಗನ್ ಪಾಯಿಂಟ್‌

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಬಿಜೆಪಿ ಗೂಂಡಾಗಳೇ ಕಾರಣ: ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್

ಮುಂದಿನ ಸುದ್ದಿ
Show comments