Webdunia - Bharat's app for daily news and videos

Install App

ಓಮಿಕ್ರಾನ್ : ಭಾರತಕ್ಕೆ ಇಷ್ಟೊಂದು ನಡುಕ ಹುಟ್ಟಿಸಿದ್ದೇಕೆ?

Webdunia
ಸೋಮವಾರ, 29 ನವೆಂಬರ್ 2021 (09:30 IST)
ಕೊರೋನಾ ಎಂದರೆ ಸಾಕು ಬಹುತೇಕ ನಿದ್ರೆ ಮಾಡುತ್ತಿರುವ ಮಂದಿ ಕೂಡ ಗಾಬರಿಗೊಂಡು ಎಚ್ಚರವಾಗಿ ಕುಳಿತು ಬಿಡುತ್ತಾರೆ.
ಅಷ್ಟರ ಮಟ್ಟಿಗೆ ಕಳೆದ ಎರಡು ವರ್ಷಗಳು ಇದರಿಂದ ನಾವು ತೊಂದರೆಯನ್ನು ಅನುಭವಿಸಿದ್ದೇವೆ. ಸಂಬಂಧಗಳಿಗೆ ಕೊಳ್ಳಿ ಇಡುವ ವೈರಸ್ ಇದು ಎಂದರೆ ತಪ್ಪಾಗಲಾರದು. ಪತ್ತೆಯಾದ ಪ್ರತಿಯೊಂದು ಹೊಸ ತಳಿ ಕೂಡ ತನ್ನದೇ ಆದ ಸಾವಿನ ಇತಿಹಾಸವನ್ನು ಬರೆದು ಸ್ವಲ್ಪ ಮಟ್ಟಿಗೆ ಮರೆಯಾಗಿದೆ.
ಈಗ ಅಂತಹದೇ ಒಂದು ಮತ್ತೊಂದು ಇತಿಹಾಸವನ್ನು ಬರೆಯಲೇಬೇಕು ಎಂದು ದಕ್ಷಿಣ ಆಫ್ರಿಕಾದ ಮೂಲಕ ಪ್ರಪಂಚಕ್ಕೆ ಕಾಲಿಟ್ಟಿದೆ B.1.1.529 (ಓಮಿಕ್ರಾನ್) ಎಂಬ ಕೋವಿಡ್-19 ಹೊಸ ತಳಿ. ಇದನ್ನು ಕಂಡರೆ ಜನರಿಗೆ ಈಗಲೇ ನಡುಕ ಶುರುವಾಗಿದೆ.
ಡೇಂಜರ್ ಡೇಂಜರ್..!
ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟಮೊದಲ ಬಾರಿಗೆ ಕಂಡು ಬಂದ ಕೋವಿಡ್-19 ಹೊಸ ತಳಿ ಕೇವಲ ಅಲ್ಲಿನ ಜನರಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಶಾಕ್ ಕೊಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಯಾರು ಈಗಾಗಲೇ 2 ಡೋಸ್ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ, ಅವರಿಗೂ ಕೂಡ ಸೋಂಕು ಹರಡಿಸುವ ಶಕ್ತಿಯನ್ನು ಈ ಹೊಸ ತಳಿ ಹೊಂದಿದೆ.
ಇದು ಕೇವಲ ಸೋಂಕುಕಾರಕ ಮಾತ್ರವಲ್ಲದೆ, ಅನುವಂಶೀಯ ಬದಲಾವಣೆಯಲ್ಲೂ ಕೂಡ ಮೇಲುಗೈ ಸಾಧಿಸಿದೆ ಎಂಬುದಾಗಿ ತಿಳಿದುಬಂದಿದೆ. ಜನರ ರೋಗನಿರೋಧಕ ಶಕ್ತಿಯ ಮೇಲೆ ಇದರ ಪ್ರಭಾವ ಇರಲಿದ್ದು, ಲಸಿಕೆ ಕೂಡ ಅಷ್ಟು ಪರಿಣಾಮಕಾರಿಯಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.
ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸದ್ಯ ಕಂಡು ಬಂದಿರುವ ಕೋವಿಡ್-19 ಹೊಸ ತಳಿ ಜನರಲ್ಲಿ ಸಾಕಷ್ಟು ವೇಗವಾಗಿ ಹರಡುತ್ತಿದೆ ಮತ್ತು ಇದು ಲಸಿಕೆ ಪಡೆದವರಲ್ಲಿ ಕೂಡ ಭಯವನ್ನು ಹುಟ್ಟುಹಾಕುತ್ತಿದೆ.
ಸಂಶೋಧಕರು ಹೇಳುವಂತೆ ಕೋವಿಡ್-19 ಹೊಸ ತಳಿ B.1.1.529 ಲಸಿಕೆ ಚಿಕಿತ್ಸೆ ಹಾಗೂ ಇತ್ಯಾದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಲಸಿಕೆಗಳ ವಿರುದ್ಧ ಇದರ ಕಾರ್ಯ ಬೇರೆಯ ರೀತಿ ಕಂಡುಬಂದಿರುತ್ತದೆ. ಆದರೆ ಹೊಸದಾಗಿ ಇದು ಪತ್ತೆಯಾಗಿರುವ ಕಾರಣದಿಂದ ಇದರ ಬಗ್ಗೆ ಮತ್ತಷ್ಟು ಅಧ್ಯಯನದ ಅಗತ್ಯತೆ ಇದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments