Publish Date: Fri, 18 May 2018 (09:11 IST)
Updated Date: Fri, 18 May 2018 (09:13 IST)
ಹೈದರಾಬಾದ್: ಕರ್ನಾಟಕದ ಶಾಸಕರ ರೆಸಾರ್ಟ್ ರಾಜಕೀಯ ಈಗ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಹೈದರಾಬಾದ್ ತಲುಪಿದ್ದಾರೆ.
ಅಲ್ಲಿನ ಬಂಜಾರ ಹಿಲ್ಸ್ ನಲ್ಲಿರುವ ಪಾರ್ಕ್ ಹಯಾತ್ ಹೋಟೆಲ್ ಗೆ ಎಲ್ಲಾ ಶಾಸಕರು ತಲುಪಿದ್ದಾರೆ. ಬಿಜೆಪಿಯ ಕೈಗೆ ಸಿಗದಂತೆ ಮಾಡಲು ಎರಡೂ ಪಕ್ಷಗಳ ನಾಯಕರು ಶಾಸಕರನ್ನು ಒಟ್ಟಾಗಿ ಕರೆದೊಯ್ದು ಒಂದೇ ಕಡೆ ನೆಲೆಸುವಂತೆ ಮಾಡಿದ್ದಾರೆ.
ಮೊದಲು ಕೇರಳದ ಕೊಚ್ಚಿಯ ರೆಸಾರ್ಟ್ ಗೆ ಶಾಸಕರನ್ನು ಕರೆದೊಯ್ಯಲಾಗುತ್ತದೆ ಎನ್ನಲಾಗಿತ್ತು. ಆದರೆ ಕೊನೆಗೆ ಹೈದರಾಬಾದ್ ಗೆ ಶಿಫ್ಟ್ ಮಾಡಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.