Select Your Language

Notifications

webdunia
webdunia
webdunia
webdunia

ಮೃತದೇಹವಿಲ್ಲದೇ ಪೋಷಕರು ಮಗಳ ಅಂತ್ಯಸಂಸ್ಕಾರ ಮಾಡಿದ್ದು ಹೇಗೆ ಗೊತ್ತಾ?

ಮೃತದೇಹವಿಲ್ಲದೇ ಪೋಷಕರು ಮಗಳ ಅಂತ್ಯಸಂಸ್ಕಾರ ಮಾಡಿದ್ದು ಹೇಗೆ ಗೊತ್ತಾ?
ಮಡಿಕೇರಿ , ಗುರುವಾರ, 11 ಅಕ್ಟೋಬರ್ 2018 (07:00 IST)
ಮಡಿಕೇರಿ : ಕೊಡಗಿನಲ್ಲಿ ಉಂಟಾದ ಮಹಾಮಳೆಗೆ ಕೊಚ್ಚಿ ಹೋದ ಮಗಳ  ಮೃತದೇಹ ಸಿಗದಿದ್ದಾಗ, ಆಕೆಯ ಪೋಷಕರು ಮಗಳ ಆತ್ಮಕ್ಕೆ ಶಾಂತಿ ಸಿಗಲು ಅಂತ್ಯಾಸಂಸ್ಕಾರ ಮಾಡಿದ ರೀತಿಯನ್ನು ನೋಡಿದರೆ ಎಂತವರ ಮನಕಲುಕುತ್ತದೆ.


10ನೇ ತರಗತಿಯ ವಿದ್ಯಾರ್ಥಿನಿಯಾದ ಮಂಜುಳಾ ಭಾರೀ ಮಳೆಯಿಂದ ಉಂಟಾದ ನೆರೆಗೆ ಕೊಚ್ಚಿ ಹೋಗಿದ್ದಳು. ಬಳಿಕ ಆಕೆಯ ಮೃತದೇಹಕ್ಕಾಗಿ ಪೋಷಕರು ಹಾಗೂ ಊರವರು ಹಲವು ಬಾರಿ  ಹುಡುಕಾಟ ನಡೆಸಿದ್ದರು. ಆದರೆ ಕೊನೆಗೂ ಅವಳ ಮೃತದೇಹ ಸಿಗದಿದ್ದಾಗ ಮಗಳ ಆತ್ಮಕ್ಕೆ ಶಾಂತಿ ಸಿಗಲು ಪೋಷಕರು ಒಂದು ಗೊಂಬೆಯನ್ನು ತಯಾರಿಸಿ ಅದಕ್ಕೆ ಅಲಂಕಾರ ಮಾಡಿ ಮದುವೆ ಮಾಡಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ.


ಈ ಕಾರ್ಯದಲ್ಲಿ ಪಾಲ್ಗೊಂಡ ಊರಿನವರು, ಆಕೆಯ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮೌನಾಚಾರಣೆ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಿಕ್ಷುಕರಿಗಾಗಿ ಪ್ರತಿದಿನ ಪಿಜ್ಜಾವನ್ನು ಉಚಿತವಾಗಿ ನೀಡಿದ ಮಹಿಳೆ