Select Your Language

Notifications

webdunia
webdunia
webdunia
webdunia

ತಿರುಪತಿಗೆ ಭೇಟಿ ನೀಡಲಿರುವ ದೇವೇಗೌಡ ಕುಟುಂಬ

ತಿರುಪತಿಗೆ ಭೇಟಿ ನೀಡಲಿರುವ ದೇವೇಗೌಡ ಕುಟುಂಬ
ಬೆಂಗಳೂರು , ಗುರುವಾರ, 26 ಜುಲೈ 2018 (09:05 IST)
ಬೆಂಗಳೂರು: ನಾಳೆ ಚಂದ್ರ ಗ್ರಹಣ ಹಿನ್ನಲೆಯಲ್ಲಿ ಇಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಕುಟುಂಬ ವರ್ಗ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.

ಗ್ರಹಣ ದೋಷ ಪರಿಹಾರಕ್ಕಾಗಿ ದೇವೇಗೌಡ ಕುಟುಂಬ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಲಿದೆ. ಇಂದು ವಿಶೇಷ ವಿಮಾನದಲ್ಲಿ ದೇವೇಗೌಡರ ಕುಟುಂಬ ತಿರುಪತಿಗೆ ತೆರಳಲಿದೆ.

ದೇವೇಗೌಡರ ಜತೆಗೆ ಸಚಿವ ಎಚ್ ಡಿ ರೇವಣ್ಣ, ಡಾ. ರಮೇಶ್, ಸೊಸೆಯಂದಿರು ಮತ್ತು ಮೊಮ್ಮಕ್ಕಳೂ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಶತಮಾನದ ಸುದೀರ್ಘ ಚಂದ್ರ ಗ್ರಹಣವಿದ್ದು, ಇದು ಕೆಲವು ನಕ್ಷತ್ರ, ರಾಶಿಯವರಿಗೆ ಹಾನಿ ಉಂಟುಮಾಡಲಿದೆ ಎಂಬ ನಂಬಿಕೆ ಕೆಲವರಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಶತಮಾನದ ಸುದೀರ್ಘ ಚಂದ್ರ ಗ್ರಹಣ ನಾಳೆ: ಎಲ್ಲೆಲ್ಲಿ ಗೋಚರ?