Select Your Language

Notifications

webdunia
webdunia
webdunia
webdunia

ರಾಜ್ಯದ ಜನತೆಗೆ ಗುಡ್ ನ್ಯೂಸ್?

ರಾಜ್ಯದ ಜನತೆಗೆ ಗುಡ್ ನ್ಯೂಸ್?
ಬೆಂಗಳೂರು , ಬುಧವಾರ, 25 ಮೇ 2022 (13:03 IST)
ಬೆಂಗಳೂರು : ದಾವೋಸ್ನಿಂದ ನಾಳೆ ಬೆಳಗ್ಗೆ ಸಿಎಂ ರಾಜ್ಯಕ್ಕೆ ವಾಪಸ್ ಆಗಲಿದ್ದು, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸುವ ಸಾಧ್ಯತೆ ಇದೆ.
 ದಾವೋಸ್ನಿಂದ ಬಂದ ಬಳಿಕ ಆರ್ಥಿಕ ಇಲಾಖೆ, ವಾಣಿಜ್ಯ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸುವ ಸಾಧ್ಯತೆ ಇದ್ದು, ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆಯ ಕುರಿತು ನಿರ್ಧಾರವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ಬರುವ ನಿರೀಕ್ಷೆಯಿದೆ.

ದಾವೋಸ್ಗೆ ಹೋಗುವ ಮುನ್ನ ಬೊಮ್ಮಾಯಿ ಅವರು, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಪರಿಶೀಲಿಸುವುದಾಗಿ ತಿಳಿಸಿದ್ದರು. ಈಗಾಗಲೇ ತೆರಿಗೆ ಇಳಿಕೆ ಬಗ್ಗೆ ವಿಪಕ್ಷಗಳು, ಜನತೆ, ಬಿಎಸ್ವೈ ಸೇರಿದಂತೆ ಹಲವು ಸ್ವಪಕ್ಷೀಯರೂ ಒತ್ತಾಯಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಆರತಕ್ಷತೆಗಿದ್ದ ವಧು ಮದುವೆ ವೇಳೆ ನಾಪತ್ತೆ