ಜೆಡಿಎಸ್ ಹಾಗೂ ಕಾಂಗ್ರೆಸ್ ನವರಿಗೆ ನಟ ಹುಚ್ಚ ವೆಂಕಟ್ ಹೇಳಿದ ಕಿವಿಮಾತು ಏನು ಗೊತ್ತಾ?

Webdunia
ಮಂಗಳವಾರ, 22 ಮೇ 2018 (08:58 IST)
ಬೆಂಗಳೂರು : ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ ಆಗಾಗ ಸುದ್ದಿಯಾಗುತ್ತಿರುವ ನಟ ಹುಚ್ಚ ವೆಂಕಟ್ ಅವರು ಇದೀಗ ರಾಜ್ಯ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ಅದೇನೆಂದರೆ ಹುಚ್ಚ ವೆಂಕಟ್ ಅವರು ಮೊದಲಿಗೆ ಮೂರು ದಿನದ ಮುಖ್ಯಮಂತ್ರಿ ಆಗಿ ರಾಜಿನಾಮೆ ಕೊಟ್ಟಿರುವ ಯಡಿಯೂರಪ್ಪನವರಿಗೆ ಸಂದೇಶವನ್ನ ಹೇಳಿದ್ದಾರೆ. ‘ಯಡಿಯೂರಪ್ಪನವರೇ ನೀವು ಸಿಎಂ ಆಗಿದ್ದು ಬಹಳ ಸಂತೋಷವಾಗಿದೆ. ನಾನು ಮೊದಲು ಬಿಜೆಪಿ ಹಾಗೂ ಮೋದಿಗೆ ಬೆಂಬಲಿಸುತ್ತಿದ್ದೆ. ಆದರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬೆಂಬಲಿಸುತ್ತೇನೆ. ನಾನು ಯಾವತ್ತೂ ಒಳ್ಳೆ ಕೆಲಸ ಮಾಡುವವರ ಜೊತೆ ಇರುತ್ತೇನೆ ,. ಬಿಜೆಪಿ ಹಾಗೂ ಮೋದಿ ಬಗ್ಗೆ ಬೇಸರಿವಿದೆ ಅದು ಯಾಕಂತ ಅವರಿಗೂ ಗೊತ್ತು. ಯಡಿಯೂರಪ್ಪನವರೇ ನೀವು ಮಾಡಿದ ಸಣ್ಣ ತಪ್ಪು ನಿಮಗೂ ಗೊತ್ತು. ಆ ಒಂದು ತಪ್ಪು ಆಯುಷ್ಯ ಪೂರ್ತಿ ನೋವು ಕೊಡುತ್ತೆ .ನಿಮಗೂ ಮೋದಿಗೂ ಆ ತಪ್ಪು ಏನಂತ ಗೊತ್ತು. ಹಾಗಾಗಿ ನಿಮಗೆ ಸಿಎಂ ಪಟ್ಟ ತಪ್ಪಿತು.’ ಎಂದು ತಿಳಿಸಿದ್ದಾರೆ.


ಹಾಗೇ ಜೆಡಿಎಸ್ ಹಾಗೂ ಕಾಂಗ್ರೆಸ್ ನವರಿಗೆ ಕಿವಿ ಮಾತನ್ನು ಹೇಳುತ್ತಾ,’ ಕುಮಾರಸ್ವಾಮಿ ಸಿಎಂ ಆಗಿದ್ದು ಬಹಳ ಖುಷಿಯಾಯಿತು, ಚೆನ್ನಾಗಿ ಆಡಳಿತ ಮಾಡಿ. ಯಾವುದೇ ರೀತುಯಲ್ಲಿ ಮೈತ್ರಿ ಸರ್ಕಾರ ಬಿರುಕು ಬಿಡಬಾರದು. ಈ ಸರ್ಕಾರ ಮುಂದೆಯೂ ನಡೆಯುತ್ತೆ. ಎಂಎಲ್ ಅವರಿಗೆ ಥ್ಯಾಂಕ್ಸ್ . ನೀವು ಬೆಂಬಲ ನೀಡಿದ್ದೀರಿ. ಯಾವ ಗಣಿ ಧಣಿ ಬರಲಿ ನಿಮ್ಮನ್ನ ಕೊಂಡುಕೊಳ್ಳೋಕೆ ಆಗಲ್ಲ. ಅವರಿಗೆ ನನ್ನ ಸ್ಟೈಲ್ ನಲ್ಲಿ ಹೇಳಬೇಕು ನನ್ನ 'ಎಕ್ಕಡ' ಕೂಡ ಕೊಂಡುಕೊಳ್ಳೋಕೆ ಆಗಲ್ಲ. ಬಜೆಟ್ ಅಂತ ಬಂದಾಗ ಮೀಡಿಯಾದವರ ಮುಂದೆ ಇಡಬೇಕು. ಅವರು ಸರಿಯಾಗಿ ಹೇಳುತ್ತಾರೆ. ರಾಹುಲ್ ಗಾಂಧಿ ನೀವು ಕುಮಾರಸ್ವಾಮಿಯವರನ್ನ ಕರೆದಿದ್ದೀರಾ, ನೀವು ಜಾಸ್ತಿ ಕಂಡೀಷನ್ಸ್ ಹಾಕಿ ಜೆಡಿಎಸ್ ನನ್ನು ದೂರ ಮಾಡೋಕೆ ಹೋಗಬೇಡಿ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭ ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸ್ಕೆಂಚ್ ಹಾಕಿದ್ದ ಐಸಿಎಸ್ ಉಗ್ರರು ಅರೆಸ್ಟ್‌

ಕಾಂಗ್ರೆಸ್ ಉತ್ತರಾಧಿಕಾರಿ ಚರ್ಚೆ ಆಮೇಲೆ ಇಟ್ಕೊಳ್ಳಿ, ಮೊದಲು ಅಭಿವೃದ್ಧಿ ಮಾಡಿ: ಎನ್ ರವಿಕುಮಾರ್

ಕೊನೆಗೂ ಯತೀಂದ್ರ ಸಿದ್ದರಾಮಯ್ಯಗೆ ಗುಮ್ಮಿದ ಡಿಕೆ ಶಿವಕುಮಾರ್ ಹೇಳಿದ್ದೇನು

ಪ್ರದೀಪ್ ಈಶ್ವರ್ ಎಚ್ಚರಿಕೆಯಿಂದ ಇರು ಮಗನೇ..: ಪ್ರತಾಪ್ ಸಿಂಹ ವಾರ್ನಿಂಗ್

ಆರ್ ಎಸ್ಎಸ್ ಚಡ್ಡಿ ಲೇವಡಿ ಮಾಡಿದ್ದ ಕಾಂಗ್ರೆಸ್: ಜವಹರಲಾಲ್ ನೆಹರೂ ಫೋಟೋ ರಿಲೀಸ್ ಮಾಡಿದ ಬಿಜೆಪಿ

ಮುಂದಿನ ಸುದ್ದಿ
Show comments