ಕೋವಿಡ್ ನಕಲಿ ಲಸಿಕೆ ವದಂತಿ: ಅಸಲಿ ಲಸಿಕೆಯನ್ನು ಪತ್ತೆ ಮಾಡುವ ವಿಧಾನ ಇಲ್ಲಿದೆ

Webdunia
ಸೋಮವಾರ, 6 ಸೆಪ್ಟಂಬರ್ 2021 (09:34 IST)
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ನಕಲಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದೆ. ಹಾಗಾಗಿ,ಕೇಂದ್ರ ಸರ್ಕಾರ ನೈಜ ಲಸಿಕೆಗಳಿಗೆ ಇರುವ ವೈಶಿಷ್ಟ್ಯತೆಗಳನ್ನು ಪ್ರಕಟಿಸಿದ್ದು, ಇವು ನಕಲಿಗಳನ್ನು ತಡೆಯಲು ಸಹಕಾರಿಯಾಗಿವೆ.

ಕೊವಿಶೀಲ್ಡ್
*ಲಸಿಕೆ ಬಾಟಲಿ ಮೇಲಿನ ಲೇಬಲ್ ಗಾಢ ಹಸಿರು ಬಣ್ಣದ್ದಾಗಿರುತ್ತದೆ.
*ಬಾಟಲಿ ಮೇಲಿನ ಅಲ್ಯೂಮಿನಿಯಂ ಕ್ಯಾಪ್ನ ಫ್ಲಿಪ್ ಗಾಢ ಹಸಿರು ಬಣ್ಣದ್ದಾಗಿರುತ್ತದೆ.
*ವಿಶೇಷ ಬಿಳಿ ಬಣ್ಣದ ಶಾಯಿಯಿಂದ ಅಕ್ಷರಗಳನ್ನು ಪ್ರಿಂಟ್ ಮಾಡಲಾಗಿರುತ್ತದೆ.
*ಎಸ್ಐಐ ಲೋಗೋವನ್ನು ಸರಿಯಾದ ಕೋನದಲ್ಲಿ ಪ್ರಿಂಟ್ ಮಾಡಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಇರುವವರು ಮಾತ್ರ ಇದನ್ನು ಗುರುತಿಸಬಲ್ಲರು.
*ಲೇಬಲ್ ಅನ್ನು ಒಂದು ಕೋನದಿಂದ ನೋಡಿದಾಗ ಅಕ್ಷರಗಳ ಬ್ಯಾಕ್ ಗ್ರೌಂಡ್ನಲ್ಲಿ ಜೇನುಗೂಡಿನ ಇಮೇಜ್ ಇರುವುದು ಕಾಣುತ್ತದೆ.
ಹೊಸ ವೀಸಾ ಪ್ರಕಟಿಸಿದ ಯುಎಇ
ಕೊವ್ಯಾಕ್ಸಿನ್
*ಬಾಟಲಿಯ ಮೇಲೆ ಹೆಲಿಕ್ಸ್ ಮಾದರಿಯ ಲೋಗೋ ಇದ್ದು, ಅದು ಅಲ್ಟ್ರಾವಯಲೆಟ್ ಬೆಳಕಿನಲ್ಲಿ ಮಾತ್ರಕಾಣುತ್ತದೆ.
*ಲೇಬರ್ನಲ್ಲಿ ಗುಪ್ತವಾಗಿ ಚುಕ್ಕಿಗಳಿಂದ ಕೊವ್ಯಾಕ್ಸಿನ್ ಎಂಬ ಇಂಗ್ಲೀಷ್ ಪದವಿದೆ.
*ಕೊವ್ಯಾಕ್ಸಿನ್ ಎಂಬ ಅಕ್ಷರಗಳಿಗೆ ಹ್ಯಾಲೋಗ್ರಾಫಿಕ್ ಎಫೆಕ್ಟ್ ನೀಡಲಾಗಿದೆ.
ಸ್ಪುತ್ನಿಕ್
*ಇವು ವಿದೇಶಗಳ ಎರಡು ಸಂಸ್ಥೆಗಳಿಂದ ಆಮದು ಮಾಡಿಕೊಂಡಿರುವುದರಿಂದ ಇವುಗಳ ಮೇಲೆ ಎರಡು ರೀತಿಯ ಲೇಬಲ್ಗಳನ್ನು ಕಾಣಬಹುದು. ಲೇಬಲ್ ಮೇಲಿನ ಮಾಹಿತಿ ಮತ್ತು ಅಕ್ಷರಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ತಯಾರಕರ ಹೆಸರು ಮಾತ್ರ ಬೇರೆ ಇರುತ್ತದೆ.
*ಐದು ಲಸಿಕೆ ಬಾಟಲಿಗಳಿರುವ ಪ್ಯಾಕ್ ಆಗಿದ್ದರೆ, ಪ್ಯಾಕ್ನ ಮೇಲೆ ಮುಂದೆ ಹಾಗೂ ಹಿಂದೆ ಇಂಗ್ಲೀಷ್ ಲೇಬಲ್ ಇರುತ್ತದೆ. ಒಳಗಿರುವ ಲಸಿಕೆ ಬಾಟಲಿಯ ಮೇಲೆ ರಷ್ಯನ್ ಭಾಷೆಯ ಲೇಬಲ್ ಇರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments