Select Your Language

Notifications

webdunia
webdunia
webdunia
webdunia

ಇಂದು ಸಿಎಂ ಕುಮಾರಸ್ವಾಮಿಗೆ ವಿಶ್ವಾಸ ಪರೀಕ್ಷೆ

ಇಂದು ಸಿಎಂ ಕುಮಾರಸ್ವಾಮಿಗೆ ವಿಶ್ವಾಸ ಪರೀಕ್ಷೆ
ಬೆಂಗಳೂರು , ಶುಕ್ರವಾರ, 25 ಮೇ 2018 (09:01 IST)
ಬೆಂಗಳೂರು: ಮೊನ್ನೆಯಷ್ಟೇ ಅಸ್ಥಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇಂದು ವಿಶ್ವಾಸಮತ ಯಾಚನೆಯ ಅಗ್ನಿಪರೀಕ್ಷೆ ಎದುರಾಗಿದೆ.

ಆದರೆ ಸಾಕಷ್ಟು ಸಂಖ್ಯಾಬಲ ಹೊಂದಿರುವುದರಿಂದ ಸಿಎಂ ಕುಮಾರಸ್ವಾಮಿಗೆ ಸೋಲಿನ ಭೀತಿ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಸದಸ್ಯರಲ್ಲದೆ ಪಕ್ಷೇತರರ ಬೆಂಬಲವೂ ಸಮ್ಮಿಶ್ರ ಸರ್ಕಾರಕ್ಕಿದೆ. ಹೀಗಾಗಿ 224 ಸದಸ್ಯ ಬಲವುಳ್ಳ ಸದನದಲ್ಲಿ ಬಹುಮತ ಸಾಬೀತಿಗೆ ಅಗತ್ಯವಿರುವ 111 ಸದಸ್ಯರ ಬೆಂಬಲ ಸರ್ಕಾರಕ್ಕೆ ಸುಲಭವಾಗಿ ಸಿಗಲಿದೆ. ಈಗಾಗಲೇ ಎರಡೂ ಪಕ್ಷಗಳ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು, ಅಡ್ಡಮತದಾನದ ಭೀತಿಯೂ ಇಲ್ಲ.

ಇಂದು ಮಧ್ಯಾಹ್ನ 12.15 ರ ನಂತರ ಕಲಾಪ ನಡೆಯಲಿದ್ದು, ಸಿಎಂ ಕುಮಾರಸ್ವಾಮಿ ಪ್ರಸ್ತಾವನೆ ಸಲ್ಲಿಸಿ ಮತಕ್ಕೆ ಹಾಕಲಿದ್ದಾರೆ. ಬಳಿಕ ವಿಶ್ವಾಸಮತ ನಡೆಯಲಿದೆ. ಇದಕ್ಕೂ ಮೊದಲು ಸ್ಪೀಕರ್ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯೂ ಕೊಟ್ಟರು ಒಂದು ಸವಾಲು!