Select Your Language

Notifications

webdunia
webdunia
webdunia
webdunia

ಸಿಕ್ಕಿರುವ 37 ಸೀಟಿಗೆ ಎಷ್ಟೆಲ್ಲಾ ಆಡ್ತಾರೆ: ಸಿಎಂ ಕುಮಾರಸ್ವಾಮಿಗೆ ಯಡಿಯೂರಪ್ಪ ತಿರುಗೇಟು

ಸಿಕ್ಕಿರುವ 37 ಸೀಟಿಗೆ ಎಷ್ಟೆಲ್ಲಾ ಆಡ್ತಾರೆ: ಸಿಎಂ ಕುಮಾರಸ್ವಾಮಿಗೆ ಯಡಿಯೂರಪ್ಪ ತಿರುಗೇಟು
ಬೆಂಗಳೂರು , ಗುರುವಾರ, 24 ಮೇ 2018 (12:36 IST)
ಬೆಂಗಳೂರು: ಪ್ರಧಾನಿ ಮೋದಿ ಅಶ್ವಮೇಧ ಕುದುರೆಯನ್ನು ನಾವು ಕಟ್ಟಿ ಹಾಕಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

‘ನಿಮ್ಮ ಸ್ಥಾನವೇನು? ನಿಮ್ಮ ಸ್ಥಾನದ ಘನತೆಯೇನು ಎಂಬುದನ್ನು ತಿಳ್ಕೊಂಡು ಮಾತನಾಡಿ. ಇದೆಲ್ಲಾ ತಮಗೆ ಶೋಭೆ ತರುತ್ತಾ? ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಬಗ್ಗೆ ಹೀಗೆಲ್ಲಾ ಮಾತನಾಡುವ ಮೊದಲು ತಮ್ಮ ಪಕ್ಷದ ಸ್ಥಾನ ತಿಳಿದುಕೊಳ್ಳಿ. ಈ ಚುನಾವಣೆಯಲ್ಲಿ ತಮ್ಮ ಪಕ್ಷ 119 ಕ್ಷೇತ್ರಗಳಲ್ಲಿ ಠೇವಣಿಯನ್ನೇ ಕಳೆದುಕೊಂಡಿತ್ತು ಎಂಬುದನ್ನು ಮರೆಯಬೇಡಿ. ಹೀನಾಯವಾಗಿ ಸೋತು ಕೇವಲ 37 ಸೀಟು ಗೆದ್ದಿದ್ದಕ್ಕೆ ಇಷ್ಟೆಲ್ಲಾ ಆಡ್ತಾರೆ’ ಎಂದು ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.

ಸಿಎಂ ಆದ ತಕ್ಷಣ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಪ್ರಧಾನಿ ಮೋದಿ ಅಶ್ವಮೇಧ ಕುದುರೆಯನ್ನು ನಾವು ಕಟ್ಟಿ ಹಾಕಿದ್ದೇವೆ. ಅಮಿತ್ ಶಾ ಈಗ ಸತ್ತ ಕುದುರೆಯನ್ನು ಪ್ರಧಾನಿ ಬಳಿಗೆ ತೆಗೆದುಕೊಂಡು ಹೋಗಬೇಕಷ್ಟೇ ಎಂದಿದ್ದರು. ಇದಕ್ಕೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಬಿಎಸ್ ವೈ ತಕ್ಕ ಏಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮಮತಾ ಬ್ಯಾನರ್ಜಿ ನಡೆದುಕೊಂಡೇ ಬರುವಂತೆ ಮಾಡಿದ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಕ್ಲಾಸ್!