Select Your Language

Notifications

webdunia
webdunia
webdunia
Thursday, 17 April 2025
webdunia

ಅಪಘಾತದಲ್ಲಿ ಚಾಲೆಂಜಿಂಗ್ ದರ್ಶನ್ ಕೈಗೆ ಪೆಟ್ಟು ಬೀಳಲು ಇದುವೇ ಕಾರಣವಾಯ್ತು!

ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (12:58 IST)
ಬೆಂಗಳೂರು: ಇಂದು ಮುಂಜಾವಿನ ವೇಳೆ ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಕಾರು ಅಪಘಾತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಯಗೊಂಡಿದ್ದರು.

ಅಪಘಾತದಲ್ಲಿ ದರ್ಶನ್ ಕೈ ಮುರಿತಕ್ಕೊಳಗಾಗಿತ್ತು. ಇದೀಗ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ದರ್ಶನ್ ಕೈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಷ್ಟಕ್ಕೂ ದರ್ಶನ್ ಕೈ ಮುರಿತಕ್ಕೊಳಗಾಗಲು ಕಾರಣವಾಗಿದ್ದು ಏನು ಗೊತ್ತಾ?

ದರ್ಶನ್ ಕೈಯಲ್ಲಿ ಸದಾ ಇರುವ ಕಡಗ. ಅಪಘಾತವಾದಾಗ ಈ ಕೈ ಬಳೆ ಮುರಿದು ಒಳೆ ಸೇರಿತ್ತು. ಇದರಿಂದ ತೀವ್ರ ರಕ್ತಸ್ರಾವವಾಯಿತು ಎನ್ನಲಾಗಿದೆ. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಕಡಗದ ಚೂರುಗಳನ್ನು ಹೊರತೆಗೆಯಲಾಗಿದೆ. ನಾನು ಆರೋಗ್ಯವಾಗಿದ್ದೇನೆ. ಯಾರೂ ಆಸ್ಪತ್ರೆ ಬಳಿಗೆ ಬಂದು ತೊಂದರೆ ಕೊಡಬೇಡಿ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ಈಗ ಖೈದಿ ನಂ.9035! ಜೈಲಿನಲ್ಲಿ ಏನ್ಮಾಡ್ತಿದ್ದಾರೆ ಕರಿಚಿರತೆ?